ಮುಧೋಳ : ಬಾಗಲಕೋಟ ಜಿಲ್ಲೆಯ ಮುಧೋಳದ ನಗರಸಭಾ ಅಧ್ಯಕ್ಷರು ಕೋವಿಡ್ ಗೆ ಬಲಿಯಾದ ಘಟನೆ ಇಂದು (23/5/2021) ಬೆಳಗಾವಿಯಲ್ಲಿ ನಡೆದಿದೆ. ಸಿದ್ದನಾಥ ಮಾನೆ (34) ಕೆಲ ದಿನಗಳ ಹಿಂದೆ ಕೋರೋನಾ ಸೋಕಿನಿಂದ ಬಳಲುತ್ತಿದ್ದ ಇವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಿದ್ದನಾಥ ಮಾನೆಯವರು ಮೃತಪಟ್ಟಿದ್ದಾರೆ. ಕಳೆದ 5 ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಕೋವಿಡ್ ಮಹಾಮಾರಿಯಿಂದ ಇವರ ತಾಯಿಯು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸಿದ್ದನಾಥ ಮಾನೆಯವರ ಸಾವಿನ ಸುದ್ಧಿ ಕೇಳಿ ಮುಧೋಳದ ಶಾಸಕರು ಹಾಗೂ ಉಪಮುಖ್ಯಮಂತ್ರಿಯಾದ ‘ಗೋವಿಂದ ಕಾರಜೋಳ’ರವರು ಸಂತಾಪ ವ್ಯಕ್ತಪಡಿಸಿದರು.
ವರದಿ ಆಕಾಶ್ ಬಶೆಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030