ಕಾರು ಚಕ್ರ ಸ್ಪೋಟವಾಗಿ ಭೀಕರ ಅಪಘಾತ…!!!

Listen to this article

ಕಾರು ಚಕ್ರ ಸ್ಪೋಟವಾಗಿ ಭೀಕರ ಅಪಘಾತ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸಿರುಗುಪ್ಪ.ಹಳೇಕೋಟೆ ಮಾರ್ಗ ಮದ್ಯೆ.ಹಳೇಕೋಟೆ ಗ್ರಾಮದ ಕುಡಿಯುವ ನೀರಿನ ಕೆರೆಯ ಹತ್ತಿರ ಮುಂಜಾನೆ ಸುಮಾರು 9.ಗಂಟೆ 30 ನಿಮಿಷಕ್ಕೆ ಭಯಂಕರ ಅಪಘಾತವಾಗಿದೆ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ನಾಲ್ಕು ಜನಕ್ಕೆ ಗಂಭೀರ ಪರಿಸ್ಥಿತಿಯಿದೆ.ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಕುರುಬರು ಶಾಂತಮ್ಮ ಗಂಡ ಶೇಕಣ್ಣ (38)ಎಂಬ ರೈತ ಮಹಿಳೆ ತಮ್ಮ ಜಮೀನಿನಲ್ಲಿ ಬೆಳೆದ ತರಕಾರಿಯನ್ನು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮಾರಾಟ ಮಾಡುತ್ತಿದಳು.ಸಿರುಗುಪ್ಪದ ಡೈವರ್ ಕಾಲೋನಿಯ ಗೀತಾ ಗಂಡ ಚಿದಾನಂದ(30) ತವರುಮನೆ ಮುಷ್ಟಗಟ್ಟೆಯಿಂದ ಮಗ ಕುಬೇರ(10) ತಮ್ಮ ಮಣಿಕಂಠ (26) ಜೊತೆಗೆ ಸಿರುಗುಪ್ಪಕ್ಕೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ರಸ್ತೆಯ ಬದಿಯಲ್ಲಿದ್ದ ತಾಜಾ ತರಕಾರಿ ಖರೀದಿಸುತ್ತಿದರು.ಆಂದ್ರದ ಅಧೋನಿ ತಾಲೂಕಿನ ನದಿಚಾಗಿ ಬಸವನಗೌಡ (55) ಮೇಳೂರು ನರಸಿಂಹ(45)ಡೈವರ್ ದಾಸಪುರ ಗಾದಿಲಿಂಗ (ಸಿರುಗುಪ್ಪ. ಬಳ್ಳಾರಿ)(27) ಇವರು ಸೀರಿಗೇರಿ ದಾಸಪುರದ ನರ್ಸರಿಗೆ ಮೇಣಸಿನಕಾಯಿ ಸಸಿ ತರುವುದಕ್ಕೆ.AP 21 R 8358 ನಂಬರಿನ ಇಂಡಿಗೋ ಕಾರಿನಲ್ಲಿ ಹೋಗುತ್ತಿದ್ದರು.ಕಾರು ಚಕ್ರ ಸ್ಪೋಟಗೊಂಡು ತರಕಾರಿ ಮಾರುತ್ತಿದ್ದ ಮತ್ತು ತರಕಾರಿ ಕೊಳ್ಳುತ್ತಿದ್ದವರ ಮೇಲೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ.ಶಾಂತಮ್ಮ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.ಗೀತಾ. ಮಣಿಕಂಠ.ಕುಬೇರ.ಡೈವರ್ ಗಾದಿಲಿಂಗ ಗಂಭೀರ ಪರಿಸ್ಥಿತಿಯಿದೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸವರಾಜ.ನರಸಿಂಹಗೆ ಸಣ್ಣಪುಟ್ಟ ಗಾಯಗಳಾಗಿವೆ. ತೆಕ್ಕಲಕೋಟೆ ಆರಕ್ಷಕ ಠಾಣೆಯ ಸಿ.ಪಿ.ಐ.ಕಾಳಿಕೃಷ್ಣ.ಪಿ.ಎಸ್.ಐ.ಶಿವಕುಮಾರ್ ನಾಯ್ಕ್. ಮತ್ತು ಸಿಬ್ಬಂದಿಯವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು..

ವರದಿ, ವಿರೇಶ್ ಹಳೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend