ಕೊರೊನ ರಕ್ಕಸಿಗೆ ಬಲಿಯಾದ ಪ್ರಾಂಶುಪಾಲರು.
ಬಳ್ಳಾರಿ.ವೀರಶೈವ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಡಾ,ವೇದವ್ಯಾಸ ಸಾಗರ್ ರವರ,ಅಗಲುವಿಕೆಗೆ ಎ. ಐ. ಡಿ. ಎಸ್.ಒ. ಬಳ್ಳಾರಿ ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ.
ಖ್ಯಾತ ಮತ್ತು ನೂರಿತ ಉಪನ್ಯಾಸಕರಾದ
ಡಾ,ವೇದವ್ಯಾಸ ಸಾಗರ್ ರವರ ದುಃಖ ಪೂರ್ಣ
ಅಗಲುವಿಕೆಗೆ ಎ. ಐ. ಡಿ. ಎಸ್.ಒ. ತೀವ್ರ ಸಂತಾಪ ಸೂಚಿಸಿದೆ.
ನಷ್ಟದ ತೀವ್ರ ಭಾವದೊಂದಿಗೆ ಅವರೊಂದಿಗಿನ
ಒಡನಾಟವನ್ನುನಾವು ನೆನಪಿಸಿಕೊಳ್ಳುತ್ತಿದ್ದೇವೆ.
ಪ್ರಸ್ತುತವಾಗಿ ವೀರಶೈವ ಪದವಿ ಕಾಲೇಜಿನಲ್ಲಿ
ಜೀವಶಾಸ್ತ್ರದ ಉಪನ್ಯಾಸಕರಾಗಿ ಮತ್ತು ವೀರಶೈವ ಪಿ.ಯು.ಕಾಲೇಜಿನ ಪ್ರಾಂಶುಪಾಲರಾಗಿ
ಕಾರ್ಯ ನಿರ್ವಹಿಸುತ್ತಿದ್ದ ,ಇವರು ವಿದ್ಯಾರ್ಥಿಗ
ಳೊಂದಿಗೆ ಮತ್ತು ಉಪನ್ಯಾಸಕ ವೃಂದದೊಂದಿಗೆ
ಸದಾಸ್ನೇಹಭಾವದೊಂದಿಗೆ ಇರುತ್ತಿದ್ದರು.
ವಿದ್ಯಾರ್ಥಿಗಳಿಗೆಭಾವನಾತ್ಮಕವಾಗಿ,ಉಪನ್ಯಾಸವನ್ನು, ನೀಡುತ್ತಿದ್ದರು.ತಮ್ಮ ವಿಷವಾಗಿದ್ದ ಜೀವಶಾ
ಸ್ತ್ರದಲ್ಲಿ ಆಳವಾದ ಜ್ಞಾನ ಹೊದಿದ್ದರಷ್ಟೇ ಅಲ್ಲ
ದೇ ,ಹಲವಾರು ವಿಷಯಗಳ ಬಗ್ಗೆಯೂ ತಿಳಿಕೊಂ
ಡಿದ್ದರು. ಅವರಿಗೆ ಮತ್ತಷ್ಟು ತಿಳಿದುಕೊಳ್ಳುವ ಜ್ಞಾನದ ಹಂಬಲವಿತ್ತು.
ಎ. ಐ. ಡಿ.ಎಸ್.ಒ. ದೊಂದಿಗೆ ನಿಕಟ ಸಂಪರ್ಕದ
ಲ್ಲಿದ್ದ ,ಇವರು ಹಲವಾರು ವಿದ್ಯಾರ್ಥಿಹೋರಾಟಗ
ಳಿಗೆ ಬೆಂಬಲಿಸುತ್ತಿದ್ದರು.
ಇಂಥಾ ನಮ್ಮ ನೆಚ್ಚಿನ ಡಾ,ವೇದವ್ಯಾಸ ಸಾಗರ್ ರವರು 5.5.2021.ರಂದು ಮದ್ಯಾಹ್ನ ಕೋವಿಡ್
-19 ರಿಂದಾಗಿ ಇವರ ಅಗಲುವಿಕೆ ,ವಿದ್ಯಾರ್ಥಿ ಮ
ತ್ತು, ಉಪನ್ಯಾಸಕ ಸಮೂಹದಲ್ಲಿ ತೀವ್ರ ದುಃಖ
ವನ್ನುಂಟು ಮಾಡಿದೆ.ವಿಜ್ಞಾನ ಮತ್ತು ಪ್ರಜಾತಾಂ
ತ್ರಿಕ ಮೌಲ್ಯಗಳನ್ನು ಸದಾ ಬೆಂಬಲಿಸುತ್ತಿದ್ದರು.
ಡಾ,ವೇದವ್ಯಾಸ ಸಾಗರ್ ರವರ ಅಗಲುವಿಕೆಯು
ವಿದ್ಯಾರ್ಥಿ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ.ಡಾ,ವೇದವ್ಯಾಸ ಸಾಗರ್ ರವರನ್ನು
ಎ. ಐ. ಡಿ. ಎಸ್.ಒ. ಯಾವಾಗಲೂ ನೆನೆಯುತ್ತೇ
ವೆಂದರು, ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ
ಎ. ಐ. ಡಿ. ಎಸ್.ಒ. ಬಳ್ಳಾರಿ ಸಮಿತಿ.
ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030