ಅಲ್ಲಿಪುರ ಗ್ರಾಮದ ವಿದ್ಯಾರ್ಥಿಗಳಿಂದ ಪ್ರತಿಭಟನೆ…!!!

Listen to this article

ಅಲ್ಲಿಪುರ ಗ್ರಾಮದ ವಿದ್ಯಾರ್ಥಿಗಳಿಂದ ಪ್ರತಿಭಟನೆ.. ಇಂದು ಗಣಿ ನಗರದಲ್ಲಿ ವಿದ್ಯಾರ್ಥಿaidso ಸಂಘಟನೆ ವತಿಯಿಂದ ಗ್ರಾಮದ ವಿದ್ಯಾರ್ಥಿಗಳಿಗೆ , ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಕೆಎಸ್ಆರ್ಟಿಸಿ ಎದುರು ಪ್ರತಿಭಟನೆ ಮಾಡಿ, ಬಳ್ಳಾರಿ ಘಟಕದ ಮೂರನೇ ವಿಭಾಗದ ಮ್ಯಾನೇಜರ್ ಈರಮ್ಮ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಪ್ರತಿಭಟನೆಯನ್ನು ಉದ್ದೇಶಿಸಿ, ಎಐಡಿಎಸ್ಒ, ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರಾದ ಕೆ.ಈರಣ್ಣ, ಅವರು ಮಾತನಾಡುತ್ತಾ,, ಬಳ್ಳಾರಿ ತಾಲೂಕಿನ ಅಲ್ಲಿಪುರ ಗ್ರಾಮದಿಂದ ಬಳ್ಳಾರಿಗೆ, ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಈ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇರುವುದಿಲ್ಲ, ವಿದ್ಯಾರ್ಥಿಗಳು ಪರದಾಡುವಂತಾಗಿದೆ, ಪ್ರತಿದಿನ ಈ ವಿದ್ಯಾರ್ಥಿಗಳು 50ರಿಂದ ರೂ .70 ರೂಪಾಯಿಗಳವರೆಗೆ, ಖರ್ಚು ಮಾಡಿ, ಬರುವಂತಾಗಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ 2- 3 ತರಗತಿಗಳನ್ನು ಹಾಜರಾಗಲು ಸಾಧ್ಯವಾಗುವಂತಹ ಸಾಧ್ಯವಿಲ್ಲದಂತಾಗಿದೆ. ಆದ್ದರಿಂದ ಈ ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ,ಬೆಳಿಗ್ಗೆ 8:45 ಕ್ಕೆ ಅಲ್ಲಿ ಪುರದಿಂದ ಸುಧಾಕರ ಕ್ರಾಸ್, ಎರಡನೇ ರೈಲ್ವೆ ಗೇಟ್, ಮೋತಿ, ರಾಯಲ್ ಸರ್ಕಲ್, ಮುಖಾಂತರ ದುರ್ಗಮ್ಮ ಗುಡಿ, ವರೆಗೂ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು, ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ, ಶಂಕರ್, ಉದಯ್, ಕಿರಣ್, ರಾಜೇಶ್, ಉಪೇಂದ್ರ, ಇನ್ನಿತರರು ಭಾಗವಹಿಸಿದ್ದರು.

ವರದಿ.ಎಂ.ಎಲ್. ವೆಂಕಟೇಶ್. ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend