#ಕ್ಷೇತ್ರದ ಜನರ ಅಳಿಲು ಸೇವೆಯಲ್ಲಿ ಎಲೆಮರಯ ಕಾಯಿಯಾಗಿ #ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ #ಕೆ_ಬಿ_ಕಲ್ಲೇರುದ್ರೇಶ್ ಆಕ್ಸೀಜನ್ ಪೂರೈಕೆ.
ಜಗಳೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಕಾಲದಲ್ಲಿ ಆಕ್ಸಿನ್ ಸಿಲಿಂಡರ್ ಗಳನ್ನು ತಲುಪಿಸಲು ಇಲ್ಲಿನ ಜೆಡಿಎಸ್ ಹಿರಿಯ ಮುಖಂಡ ಕೆ.ಬಿ.ಕಲ್ಲೇರುದ್ರೇಶ್ ಸ್ವಯಂ ಪ್ರೇರಣೆಯಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸೇವೆಗೆ ಕೈಜೋಡಿಸಿರುವ ಅವರು ಹರಿಹರದ ಸೌಥ್ರನ್ ಗ್ಯಾಸ್ ಕಚೇರಿಯಿಂದ ವಾಹನದಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ಲೋಡ್ ತುಂಬಿಸಿಕೊಂಡು ಸಕಾಲಕ್ಕೆ ಜಗಳೂರು ಸರ್ಕಾರಿ ಆಸ್ಪತ್ರೆಗೆ ತಲುಪಿ ಸುತ್ತಿದ್ದಾರೆ. ಜಗಳೂರು ಆಸ್ಪತ್ರೆಯಲ್ಲಿ
ಪ್ರತಿ ಗಂಟೆಗೆ ಎರಡು ಸಿಲಿಂಡರ್ ಅವಶ್ಯಕತೆ ಇದೆ.
ಆಕ್ಸಿನ್ ಕಂಪನಿಗಳು ಕೊಟ್ಟೊಷ್ಟೆ ಸಿಲಿಂಡರ್ ತೆಗೆದುಕೊಂಡು ಬರಬೇಕಾದ ಪರಿಸ್ಥಿತಿ ಇರುವುದರಿಂದ ಜಗಳೂರು ಹರಿಹರಕ್ಕೆ ಎಡತಾಕಬೇಕಾದ ಪರಿಸ್ಥಿತಿ ಇದೆ ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವರ ಹಿತಾದೃಷ್ಟಿ ಮತ್ತು ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ಗಂಗಾಧರಪ್ಪ, ಜಗಳೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ, ನೀರಜ್ ಸಹಕಾರ ನೀಡುವ ಉದ್ದೇಶದಿಂದಾಗಿ ಸ್ವಯಂ ಪ್ರೇರಣೆಯಿಂದ ಸೇವೆ ನೀಡುತ್ತಿದ್ದೇನೆಂದು ಕಲ್ಲೇರುದ್ರೇಶ್ ಪ್ರತಿಕ್ರಿಯಿಸಿದ್ದಾರೆ…
ವರದಿ. ಸಂದೀಪ್ ಜಗಳೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030