ಎದೆಗಾರಿಕೆ ಇದ್ದರೆ ನನ್ನ ಬಗ್ಗೆ ಇರುವ ಆಡಿಯೋ ವಿಡಿಯೋ ಶಾಸಕ ರಾಮಚಂದ್ರ ಬಿಡುಗಡೆಗೊಳಿಸಲಿ ಮಾಜಿ ಶಾಸಕ ರಾಜೇಶ್ ಸವಾಲು
ಗಾಳಿಯಲ್ಲಿ ಗುಂಡು ಒಡಿಯೋ ಬದಲು ದೈರ್ಯ,
ಧಮ್ ಇದ್ದರೆ ಶಾಸಕ ರಾಮಚಂದ್ರ ಅವರು ನನ್ನ ಬಗ್ಗೆ ಇರುವ ಆಡಿಯೋ, ವಿಡಿಯೋ, ಬಿಡುಗಡೆ ಮಾಡಲಿ ಮಾಜಿ ಶಾಸಕ ರಾಜೇಶ್ ಹಾಲಿ ಶಾಸಕರಿಗೆ ಸವಾಲು ಹಾಕಿದರು.
ಪತ್ರಕರ್ತರ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು
ತಾಲೂಕಿನಲ್ಲಿ ಆಡತಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದೆ, ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗಿದ್ದು, ರಸ್ತೆ ಕಾಮಗಾರಿ ಮಾಡಿ ವಾರದಲ್ಲಿಯೇ ಕಿತ್ತು ಹೋಗಿದೆ, ಹೀಗೆ ಹಲವು ವಿಚಾರವಾಗಿ, ಪ್ರಚಾರ ಪ್ರಿಯ ಸುಳ್ಳುಗಾರ, ಕ್ಷೇತ್ರವನ್ನು ವ್ಯಾಪರ ಕೇಂದ್ರವನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವುದು ನಿಜ ಆದರೆ ಶಾಸಕರ ವೈಕ್ತಿಕ ವಿಚಾರಗಳ ಕುರಿತು ಮಾತನಾಡಿಲ್ಲ ಅಲ್ಲದೇ ರಾಜಕೀಯ ಎಂದರೆ ಟೀಕೆ ಟಿಪ್ಪಣಿಗಳು ಸಹಜ ಆದರೆ ಇದಕ್ಕಾಗಿ ನನ್ನ ಬಳಿ ಮಾಜಿ ಶಾಸಕರು ವಿಡಿಯೋ,ಆಡಿಯೋ ಇದೆ ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸುತ್ತೇನೆ ಎಂದು ಹೇಳಿರುವ ಶಾಸಕ ರಾಮಚಂದ್ರ ತಾಕತ್ ಇದ್ದರೆ ನಾಳೆನೇ ಆಡಿಯೋ ವಿಡಿಯೋ ಬಿಡುಗಡೆಗೊಳಿಸಲಿ ನಾನು ಎಂತವನೂ ಎಂದು ಕ್ಷೇತ್ರದ ಜನತೆಗೂ ಗೊತ್ತಗಲ್ಲಿ ಇಲ್ಲವಾದಲ್ಲಿ ಕ್ಷಮೆಯಾಚಿಸಲಿ ಎಂದು ಸವಾಲು ಹಾಕಿದರು.
ರಾಜಕರಾಣ ಮಾಡುವುದಕ್ಕೆ ನಾನು ರಾಜಕೀಯ ಜೀವನಕ್ಕೆ ಬಂದಿಲ್ಲ ಸಮಾಜಿಕ ಸೇವೆ ಮಾಡುವುದಕ್ಕೆ ಬಂದಿದ್ದೇನೆ. ಶಾಸಕರು
ಚುನಾವಣೆ ಹತ್ತಿರ ಬಂದಾಗೆಲ್ಲೆ ಸೋಲಿನ ಭೀತಿಯಲ್ಲಿ ಆತಶಯರಾಗಿ ಮುಂದಿನ ಚುನಾವಣೆಯಲ್ಲಿ ಗೆಲುತ್ತೇನೆ ಸೋಲುತ್ತೆನೋ ಎಂಬುವ ಗೊಂದಲದಿಂದ ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡು ಮಾತನಾಡುತ್ತಾರೆ ಎಂದು ಹೇಳಿದರು.
ಶಾಸಕರು ಎಂದರೆ ಒಂದು ತೂಕ ತುಂಡು ಇದ್ದು ಮಾತನಾಡಬೇಕು ಆದರೆ ಬೇಜಾವಬ್ದಾರಿಯುತವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಸಲಹೆ ನೀಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕರು ತಮ್ಮದೇ ಸಮುದಾಯದ ಕ್ಷೇತ್ರದ ಜನರಿಗೆ ಗಂಗಕಲ್ಯಾಣ, ಐರಾವತ ಯೋಜನೆಯಲ್ಲಿ ಎಷ್ಟು ಕಾರು, ಮನೆಗಳು ನೀಡಿದ್ದೇನೆ ಎಂದು ಹೇಳಿದರಲ್ಲದೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ನಿಮ್ಮದೆ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಮಾಹಿತಿ ತರಿಸಿಕೊಳ್ಳುತ್ತೇನೆ ತಡೆಹಿಡಿಯುವ ಕೆಲಸ ಶಾಸಕರು ಮಾಡಬೇಡಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶೀರ್ ಅಹಮ್ಮದ್, ಕಲ್ಲೇಶ್ ರಾಜ್ ಪಾಟೀಲ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಬೈರೇಶ್, ಕುಬೆಂದ್ರಪ್ಪ, ವೆಂಕಟೇಶ, ನಂಜುಂನಡ ಸ್ವಾಮಿ, , ರಾಮರೆಡ್ಡಿ, ಪ್ರಕಾಶ ಚಿತ್ತಾಣ,ರವಿಚಂದ್ರ. ದೇವರಾಜ್, ತಾನಾಜಿ ಗೂಸಾಯಿ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು…
ವರದಿ. ಸಂದೀಪ್. ಎಚ್. ಜಗಳೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030