ನೇತ್ರದಾನ: ಸಾವಿನಲ್ಲೂ ಕೃಪಾಕರ್ ಸಾರ್ಥಕತೆ
ಚಿತ್ರದುರ್ಗ
ನಗರದ ಕೆಳಗೋಟೆ ಮುನ್ಸಿಪಲ್ ಕಾಲೋನಿ ನಿವಾಸಿ ಕೃಪಾಕರ್(೯೦)ರವರು ಗುರುವಾರ ಬಸವೇಶ್ವರ ಆಸ್ಪತ್ರೆಯಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು, ತಮ್ಮ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಇವರು ಲೋಕೋಪಯೋಗಿ ಇಲಾಖೆ ಶಿವಮೊಗ್ಗ ಜಿಲ್ಲೆ ಭದ್ರಾ ಪ್ರಾಜೆಕ್ಟ್ನಲ್ಲಿ ರಿಜಿಸ್ಟರ್ ಆಗಿ 30 ಕ್ಕೂ ಹೆಚ್ಚು ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲೂ ಖ್ಯಾತ ನಾಮರಾಗಿ ಗುರುತಿಸಿಕೊಂಡಿದ್ದರು.
ವೈದ್ಯರಾದ ಡಾ. ವಿಶಾಲ್ ಮತ್ತು ಡಾ. ಸ್ಮಿತ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಎರಡು ಕಣ್ಣುಗಳನ್ನು ದಾನವಾಗಿ ಪಡಿದಿದ್ದಾರೆ. ಎರಡು ಕಣ್ಣುಗಳು ಉತ್ತಮ ಇವರ ಕಣ್ಣುಗಳಿಂದ ಜೀವನದಲ್ಲಿಯೇ ಬೆಳಕು ಕಾಣದ ಇಬ್ಬರು ಜಗತ್ತನ್ನು ನೋಡಬಹುದಾಗಿದೆ. ಇದೇ ರೀತಿ ಎಲ್ಲರೂ ಮುಂದೆ ಬಂದರೆ ದಾನಿಗಳಿಂದ ಕಣ್ಣುಗಳಿಗೆ ಕಾಯುತ್ತಿರುವವರ ಜೀವನಕ್ಕೆ ಬೆಳಕು ನೀಡಿದಂತಾಗುತ್ತೆ ಎಂದು ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಸ್ಥಾಪನಾ ಅಧ್ಯಕ್ಷರಾದ ಗಾಯಿತ್ರಿ ಶಿವರಾಮ್ ತಿಳಿಸಿದರು…
ವರದಿ. ಸುರೇಶ್. ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030