ಅಶೋಕ ಲೈಲ್ಯಾಂಡ್ ವಾಹನ ಮತ್ತು ಲಾರಿ ನಡುವೆ ಅಪಘಾತ ನಡೆದು ಒಬ್ಬ ವ್ಯಕ್ತಿ ಹಾಗೂ ಎರಡು ಎತ್ತುಗಳು ಮೃತಪಟ್ಟ ಘಟನೆ ದೊಡ್ಡಸಿದ್ದವ್ವನಹಳ್ಳಿ ಹತ್ತಿರ ನಡೆದ ಘಟನೆ…!!!

Listen to this article

ಅಶೋಕ ಲೈಲ್ಯಾಂಡ್ ವಾಹನ ಮತ್ತು ಲಾರಿ ನಡುವೆ ಅಪಘಾತ ನಡೆದು ಒಬ್ಬ ವ್ಯಕ್ತಿ ಹಾಗೂ ಎರಡು ಎತ್ತುಗಳು ಮೃತಪಟ್ಟ ಘಟನೆ ದೊಡ್ಡಸಿದ್ದವ್ವನಹಳ್ಳಿ ಹಾಗೂ ಕ್ಯಾದ್ದಿಗ್ಗೆರೆ ಗ್ರಾಮಗಳ ಮದ್ಯೆ ನಡೆದಿದೆ.

ಇನ್ನೂ ವಿಜಯಪುರ ಜಿಲ್ಲೆಯ ತಿಮ್ಮಲಾಪುರ ಗ್ರಾಮದ ಲಕ್ಷಿ ಎಂಬುವವರು ತಮ್ಮ ಗಂಡ ಗಾಳಯ್ಯಪ್ಪ ಮತ್ತು ಮಗನ ಜೊತೆ ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮಕ್ಕೆ ಕಬ್ಬು ಕಡಿಯುವ ಕೂಲಿ ಕೆಲಸಕ್ಕೆ ತಮ್ಮ ಗ್ರಾಮದ ರಾಮಲ್ಲಿನಾಯ್ಕ ಅವರ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಎರಡು ಎತ್ತುಗಳನ್ನ ಹಾಕಿಕೊಂಡು ಹಿಂದೆ ಟೈರ್ ಗಳ ಗಾಡಿಯನ್ನ ಕಟ್ಟಿಕೊಂಡು ರಾಮಲ್ಲಿನಾಯ್ಕ ಅವರು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ವಾಹನವು ದೊಡ್ಡಸಿದ್ದವ್ವನಹಳ್ಳಿ ಹಾಗೂ ಕ್ಯಾದ್ದಿಗ್ಗೆರೆ ಗ್ರಾಮಗಳ ಮದ್ಯೆ ಬಂದಾಗ ತಮಿಳುನಾಡು ಮೂಲದ ಲಾರಿಯೊಂದು ನಿರ್ಲಕ್ಷ್ಯತನದಿಂದ ಯಾವುದೇ ಮುನ್ಸೂಚನೆ ನೀಡದೇ ಒಂದೇ ಸಮನೇ ಬ್ರೇಕ್ ಹಾಕಿದ್ದು ಹಿಂದಿನಿಂದ ಬರುತ್ತಿದ್ದ ಅಶೋಕ ಲೈಲ್ಯಾಂಡ್ ವಾಹನ ಹೋಗಿ ಡಿಕ್ಕಿ ಹೊಡೆದಿದ್ದು.

ಎರಡು ವಾಹನಗಳು ಜಖಂ ಗೊಂಡಿದ್ದು ಗಾಳಯ್ಯಪ್ಪ ಅವರಿಗೆ ತೀರ್ವವಾದ ಪೆಟ್ಟು ಬಿದ್ದು ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದು ಜೊತೆಗೆ ಎರಡು ಎತ್ತುಗಳು ಸ್ಥಳದಲ್ಲೆ ಮೃತಪಟ್ಟಿದ್ದು ವಾಹನದಲ್ಲಿದ್ದ ಇತರೆ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಶವವನ್ನ ಶವಾಗಾರಕ್ಕೆ ರವಾನೆ ಮಾಡಿ ಗಾಯಾಳುಗಳನ್ನ ಅಸ್ಪತ್ರೆಗೆ ಧಾಖಲಿಸಿದ್ದು ಪ್ರಖರಣವನ್ನ ಧಾಖಲಿಸಿಕೊಂಡಿದ್ದಾರೆ..

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend