ಶಾಸಕರಿಂದ ಜಲ‌ ಜೀವನ್ ಮಿಷನ್ ಯೋಜನೆಯ ಕೆಲಸಕ್ಕೆ ಗುದ್ದಲಿ ಪೂಜೆ…!!!

Listen to this article

ಚಿತ್ರದುರ್ಗ: ಜಲ‌ ಜೀವನ್ ಮಿಷನ್ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಿಗೂ,ನಲ್ಲಿ‌ ಮೂಲಕ ಶುದ್ದ ಕುಡಿಯುವ ನೀರು ಒದಗಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಆಲಗಟ್ಟ, ಓಬವ್ವನಾಗತೀಹಳ್ಳಿ ಮತ್ತು ಗೊಲ್ಲರಹಟ್ಟಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮತ್ತು ಪ್ರತಿ ಮನೆಗೆ ನಲ್ಲಿ ಮೂಲಕ‌ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಜಲಜೀವನ್ ಮಿಷನ್ ಸಹ ಒಂದಾಗಿದೆ. ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಸರ್ಕಾರ ಸಾಕಷ್ಟು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದರೂ ಸಹ, ಇನ್ನು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಜಾತ್ಯತೀತವಾಗಿ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಮೂಲಕ, ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ ಎಂದರು. ಕ್ಷೇತ್ರದ ಗ್ರಾಮೀಣ ಭಾಗದ ಪ್ರತಿ ಮನೆಗೆ ನೀರು ಪೂರೈಸುವ ಯೋಜನೆಯನ್ನು ದೂರದೃಷ್ಟಿ ಕೋನದಿಂದ ಮಾಡಲಾಗಿದೆ. ಇಂದು ಅಲಗಟ್ಟ ಗ್ರಾಮದ 358 ಮನೆಗಳಿಗೆ 66.5 ಲಕ್ಷ, ಓಬವ್ವನಾಗತೀಹಳ್ಳಿ ಗ್ರಾಮದ 230 ಮನೆಗಳಿಗೆ 47.60 ಲಕ್ಷ , ಗೊಲ್ಲರಹಟ್ಟಿ ಗ್ರಾಮದ 30 ಮನೆಗಳಿಗೆ 25. ಲಕ್ಷ ವೆಚ್ಚದಲ್ಲಿ ಒಟ್ಟು 1 ಕೋಟಿ 40.ಲಕ್ಷ ವೆಚ್ಚದ
ಕಾಮಗಾರಿಯನ್ನು ಚಿತ್ರದುರ್ಗ ಜಲ‌ ಜೀವನ್ ಮಿಷನ್ ಯೋಜನೆ ಮೂಲಕ, ಶುದ್ದ ಕುಡಿಯುವ ನೀರು ಪೂರೈಸಲಾಗುವುದುಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿಜಮ್ಮ, ಉಪಾಧ್ಯಕ್ಷ ನಿರ್ಮಲ, ಸದಸ್ಯರಾದ ರಾಮಪ್ಪ, ನಾಗರಾಜ, ರತ್ನಮ್ಮ, ಮುಖಂಡರಾದ ಗೋವಿಂದರಾಜ್, ಲೋಹಿತ್, ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಪುರುಷೋತ್ತಮ್, ಇಂಜಿನಿಯರ್ ಅರುಣ್ ಕುಮಾರ್ ಸೇರಿದಂತೆ, ಗ್ರಾಮದ ಮುಖಂಡರು ಇದ್ದರು…

ವರದಿ.ಗಿರೀಜಾ, ಜೆ, ಬೆಳ್ಳೆಕಟ್ಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend