ಚಡಚಣ ಪೋಲೀಸರ ಭರ್ಜರಿ ಬೇಟೆ…!!!

Listen to this article

ಚಡಚಣ ಪೋಲೀಸರ ಭರ್ಜರಿ ಬೇಟೆ

ಚಡಚಣ : ಚಡಚಣ ಪಟ್ಟಣದಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ರಂಜಿತ ಕಾಳೆ, ವಿಠ್ಠಲ ಘೂಲೆ, ಸಚಿನ ಶಿರಕೆ ಬಂಧಿತ ಆರೋಪಿಗಳು. ಇನ್ನು ಆರೋಪಿಗಳು ಮೂಲತಃ ಸೋಲಾಪುರ ಜಿಲ್ಲೆಯ ಸಂಗೋಲಾ ಗ್ರಾಮದವರು. ಸಾಂಗೋಲಾ ನಿವಾಸಿಯಾದ ಚಂದ್ರಕಾಂತ ಮಸ್ಕೆ ಎಂಬುವರು ಆರೋಪಿ ಡ್ರೈವರ್ ರಂಜಿತ್ ಜೊತೆಗೆ ವಾಹನದಲ್ಲಿ ಉಮದಿ ಮಾರ್ಗವಾಗಿ ಚಡಚಣ ಪಟ್ಟಣದಲ್ಲಿ ಅಂಗಡಿ ವಸ್ತುಗಳನ್ನು ಖರೀದಿಸಲು ಹೋಗುತ್ತಿದ್ದ ವೇಳೆಯಲ್ಲಿ ಆರೋಪಿಗಳು ರಾಮಚಂದ್ರಗೆ ಬೆದರಿಸಿ ಕಣ್ಣಿಗೆ ಖಾರದ ಪುಡಿ ಹಾಕಿ 12.50 ಲಕ್ಷ ದೋಚಿಕೊಂಡು ಪರಾರಿಯಾಗಿದ್ದರು. ಇದೀಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ 12.35 ಲಕ್ಷ, ನಗದು 1 ಮೋಟರ ಸ್ಯೆಕಲ್, ಮೊಬೈಲ್ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಿ. ಪಿ. ಐ. ಸಾಹೇಬಗೌಡ ಪಾಟೀಲ, ಪಿ.ಎಸ್.ಐ. ಸಂಜಯ ತಿಪ್ಪರೆಡ್ಡಿ, ಸಿಬ್ಬಂಧಿಗಳಾದ ಎಂ. ಏನ್. ಹೊನ್ನಕಟ್ಟಿ ಆರ್. ಜಿ. ಸಾತಲಗಾಂವ, ರವಿ ಡೋಣಗಿ, ಶಂಕರ ಹಳ್ಳಿ, ಕೆ. ಬಿ. ಪಾಟೀಲ ಎ. ಆರ್. ಮಕಾನದರ ಸೇರಿದಂತೆ ಹಲವು ಸಿಬಂದಿಗಳು ಇದ್ದರು.

ಚಡಚಣ ಪೋಲೀಸರ ಕಾರ್ಯವೈಖರಿಯನ್ನು ಪಟ್ಟಣದ ಜನತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ವರದಿ:-ಮಹಾಲಿಂಗ ಗಗ್ಗರಿ. ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend