ಪ್ರವೀಣ್ ನೆಟ್ಟಾರ್ ಹಂತಕರ ವಿರುದ್ಧ ಕಾನೂನು ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಒತ್ತಾಯ…!!!

Listen to this article

ಪ್ರವೀಣ್ ನೆಟ್ಟಾರ್ ಹಂತಕರ ವಿರುದ್ಧ ಕಾನೂನು ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಒತ್ತಾಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ನಾಡಕಚೇರಿಯಲ್ಲಿ ಹಿಂದು ಹಿಂದು ಕಾರ್ಯಕರ್ತರ ಪ್ರವೀಣ್ ನೆಹರ ಅವರ ಹತ್ಯೆಯನ್ನು ಖಂಡಿಸಿ ಹಂತಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಮತ್ತು ಕಠಿಣ ಶಿಕ್ಷೆ ನೀಡಬೇಕೆಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೊಸ ಹಳ್ಳಿ ನಾಡಕಚೇರಿ ಉಪತಶಿಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.


ಭಾರತ ಅನೇಕ ಜಾತಿ ಧರ್ಮಗಳನ್ನು ಹೊಂದಿದ್ದು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಎಲ್ಲರೂ ಸಹ ಸಹಬಾಳ್ವೆಯಿಂದ ಬರುತ್ತಿದ್ದು ಯಾರೋ ಕೆಲ ವ್ಯಕ್ತಿಗಳು ಇಂತಹ ಹೀನ ಕೃತ್ಯ ಮಾಡಿ ಸಮಾಜದ ನೆಮ್ಮದಿಯನ್ನು ಕದಡುತ್ತಿದ್ದಾರೆ. ಇಂತಹ ಸಮಾಜ ದ್ರೋಹಿಗಳನ್ನು ಬಂಧಿಸಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ಹಂತಕರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಬಿಜೆಪಿ ಕಾರ್ಯಕರ್ತರ ವೀರೇಶ್ ಕಿಟ್ಟಪ್ಪ ನವರ್ ಮಾತನಾಡಿದರು.


ಇದೇ ಸಂದರ್ಭದಲ್ಲಿ ಬಿಜೆಪಿಯ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರುಗಳಾದ ಕೆ ಎಸ್ ವಿಶ್ವನಾಥ್. ಹನುಮಜ್ಜ ನಾಗೇಶ್. ಚೌಡಪ್ಪ. ವಿರುಪಣ್ಣ. ಕೆಎಸ್ ವೀರೇಶ್ ಜೋಗಳಿ ಸಿದ್ದಪ್ಪ. ಪಿತಾಂಬರ. ಯಶ್ವಂತ್ ಕುಮಾರ್. ಶರತ್. ನಡಲು ಮನೆ ತಿಪ್ಪೇಸ್ವಾಮಿ. ಫೋಟೋ ನಾಗರಾಜ್. ಜೆ ಎಂ ಮಂಜುನಾಥ. ರಾಕೇಶ್. ಸಂತೋಷ್. ಕೆಎಸ್ ವಿನೋದ್. ಸತೀಶ್. ಸುರೇಶ್ ಸೇರಿ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend