ಕಬಡ್ಡಿ ಸ್ಪರ್ಧೆ:ಚಂದ್ರಶೇಖರ ಪುರ ಪ್ರೌಢಶಾಲೆ ವಿಜಯನಗರ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಗುಡೇಕೋಟೆ:- ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಬಾಲಕಿಯರ ವಿಭಾಗದ ಕಬ್ಬಡಿಯಲ್ಲಿ 2022 -23ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕೂಡ್ಲಿಗಿ ತಾಲೂಕು ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ವಿಜಯನಗರ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಸರ್ಕಾರಿ ಪ್ರೌಢಶಾಲೆ ಚಂದ್ರಶೇಖರಪುರ ಶಾಲೆಯ, ಮುಖ್ಯಗುರುಗಳಾದ,ಎಂ.ಜಯಪಾರ್ವತಿ,ತಿಳಿಸಿದ್ದಾರೆ.
ನಿನ್ನೆ ಕೂಡ್ಲಿಗಿ ತಾಲೂಕು ಶ್ರೀ ವಾಸವಿ ಶಾಲೆ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಕಬ್ಬಡ್ಡಿ ಸ್ಪರ್ದೆಯಲ್ಲಿ ಭಾಗವಹಿಸಿದ ಪ್ರೌಡಶಾಲೆಯ ತಂಡದ ವಿದ್ಯಾರ್ಥಿನಿಯರಾದ ಕುಮಾರಿ ಎ.ಕೆ.ಮರಿದೇವಿ, ಕೆ ಮಹಾಲಿಂಗಮ್ಮ, ಜಿ ಪಲ್ಲವಿ, ವೈ ಕೆ ವಿನೋದಾ, ಯು ಪೂಜಾ, ಎಂ ಎನ್ ಬೇಬಿ, ಎಚ್ ನಂದಿನಿ, ಅನನ್ಯ, ಡಿ ನಂದಿನಿ, ಎಚ್ ಪೂಜಾ, ಕಾವ್ಯ, ಎ,ಕೆ ಆಶಾ,ಅವರುಗಳು. ಎದುರಾಳಿ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲೆಯ ದೈಹಿಕ ಶಿಕ್ಷಕರಾದ ಹೆಚ್.ಡಿ.ಅರುಣ್ ಕುಮಾರ್ ಉತ್ತಮ ತರಬೇತಿ ನೀಡಿದ್ದು, ವಿದ್ಯಾರ್ಥಿನಿಯರ ಸಾಧನೆಗೆ ಸಹ ಶಿಕ್ಷಕರಾದ ಡಿ ಲಕ್ಷ್ಮೀದೇವಿ, ಟಿ ಜಯಲಕ್ಷ್ಮೀ ,ಜಿ ಗೋವಿಂದಪ್ಪ, ಎನ್ ಎಂ ಶ್ರೀಕಾಂತ್, ಜಿ ರವೀಂದ್ರ, ಜೆ.ಎಂ ರೇವಣರಾಧ್ಯ ,ಕೆ ಅಂಜಿನಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಾರಣ್ಣ, ಉಪಾಧ್ಯಕ್ಷರಾದ ಬಿ ಕುಮಾರಸ್ವಾಮಿ, ಮತ್ತು ಸದಸ್ಯರು ಕ್ರೀಡಾ ಪ್ರೇಮಿಗಳು ಊರಿನ ಎಲ್ಲಾ ಗಣ್ಯ ಮಾನ್ಯರು ಅಭಿನಂದನೆ ಸಲ್ಲಿಸಿ ಶುಭಾಶಯ ಕೋರಿದ್ದಾರೆ.
ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030