ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪಾಳೇಗಾರರ ಆಸ್ಥಾನವೆಂದೆ ಖ್ಯಾತಿ ಪಡೆದ ಐತಿಹಾಸಿಕ ಹಿನ್ನೆಲೆ ಇರುವ ಗುಡೇಕೋಟೆ ಗ್ರಾಮದಲ್ಲಿ ಪ್ರತಿ 7 ವರ್ಷಕ್ಕೆ ಒಮ್ಮೆ ಜರಗುವ ಶ್ರೀ ಕೊಡಿ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.
ದೈರ್ಯ ತುಂಬುವ
ಮಹಾಮಾತೆ.
ಭಕ್ತ ಕುಲಕೆ
ಸಂದ ಮಮತೆ.
ಜನರ ಸಲಹೊ
ಜಗನ್ಮಾತೆ.
ಗುಡೇಕೋಟೆಯ
ಶಕ್ತಿದಾತೆ.
ಕೊಡಿ ದುರ್ಗಮ್ಮ ತಾಯಿ ಊರಿಗೆ ಉತ್ತಮ ಮಳೆ ಬೆಳೆ ಕೊಡು, ಜನರ ಕಷ್ಟ ಕಾರ್ಪಣ್ಯ, ರೋಗ ಋಜನೇ, ದುಷ್ಟ ಶಕ್ತಿಗಳನ್ನು ದೂರಮಾಡಿ ಗುಡೇಕೋಟೆಯನ್ನು ಸಮೃದ್ಧಿಗೊಳಿಸು ತಾಯಿ ಎಂದು ಯೂನುಸ್ ಖಾನ್ ಉಪನ್ಯಾಸಕರು ಶುಭ ಕೋರಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030