ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
*ಕೂಡ್ಲಿಗಿ:2ಎ ಕೊಡಿ- ಪಂಚಮಸಾಲಿ ಸಮಾಜದಿಂದ ಒತ್ತಾಯ*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಾ2ರಂದು, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.ಕೂಡ್ಲಿಗಿ ತಾಲೂಕು ಪಂಚಮಸಾಲಿ ಮುಖಂಡರು ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಿದ್ದು,ಹಿರಿಯ ಮುಖಂಡರಾದ ಗುಂಡುಮುಣುಗು ತಿಪ್ಪೇಸ್ವಾಮಿ ನೇತೃತ್ವದಲ್ಲಿ ತಹಶಿಲ್ದಾರ್ ಎಸ್.ಮಹಾಬಲೇಶ್ವರವರಿಗೆ ಮನವಿ ಸಲ್ಲಿಸಿದರು.ರಾಜ್ಯಸರ್ಕಾರ ಕೂಡಲೇ 2ಎ ಮೀಸಲಾತಿ ನೀಡಬೇಕು ಎಂದು ಅವರು ರಾಜ್ಯಸರ್ಕಾರಕ್ಕೆ ಒತ್ತಾಯ ಪಡಿಸಿದರು.ಸಮಾಜದ ಮುಖಂಡರಾದ ಟಿ.ಜಿ.ಮಲ್ಲಿಕಾರ್ಜುನಗೌಡ,ಗುಳಿಗಿ ವೀರೇಂದ್ರಕುಮಾರ,ಜಿಲ್ಲಾ ಪಂಚಾಯಿತಿ ಸದಸ್ಯರಾದ ರೇವಣ್ಣ,ನಂದಿ ಬಸವರಾಜ, ಮರುಳಸಿದ್ದಪ್ಪ,ಪಪಂಮಾಜಿ ಅಧ್ಯಕ್ಷ ರಜನಿಕಾಂತ,ಸುನೀಲ್ ಗೌಡ, ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ಸಮಾಜ ಹಿರಿಯರು,ಮಖಂಡರು ವಿವಿದ ಜನಪ್ರತಿನಿಧಿಗಳು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030