ಗುಡೇಕೋಟೆ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕುರಿತು ರೈತರಿಗೊಂದು ಮಾಹಿತಿ
ಗುಡೇಕೋಟೆ ಜು.8:-ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಮತ್ತು ಅಪ್ಪೇನಹಳ್ಳಿ ಗ್ರಾಮಗಳಲ್ಲಿ ಗುಡೆಕೋಟೆ ರೈತ ಸಂಪರ್ಕ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಫಸಲ್ ಭೀಮಾ ಯೋಜನೆ ಕುರಿತು ಹಾಗೂ ಬೆಳೆ ವಿಮೆಯ ಕುರಿತು ರೈತರಿಗೆ ಸಮಗ್ರವಾದ ಮಾಹಿತಿಯನ್ನು ತಾಲೂಕಿನ ಉಳಿದ 8 ಗ್ರಾಮ ಪಂಚಾಯಿತಿಗಳಲ್ಲಿ ಭೇಟಿ ನೀಡಿ ಮಾಹಿತಿ ಪ್ರಸಾರ ಮಾಡಲಾಗುವುದು ಎಂದು ಪ್ರಭಾರ ಸಹಾಯಕ ಕೃಷಿ ಅಧಿಕಾರಿ ಹಾಲಪ್ಪ ನವರು ರೈತರ ಜೋತೆ ಸಂವಾದ ನಡೆಸಿದರು.
ಬೆಳೆ ಹಾನಿಯಾದ ವೇಳೆ ಪರಿಹಾರ ನೀಡುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತರಲಾಗಿದೆ ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಬೆಳೆ ವಿಮೆ ಯೋಜನೆಗೆ ನೊಂದಣಿ ಮಾಡಲು ಜುಲೈ 31 ಅಂತಿಮ ದಿನಾಂಕವಾಗಿದ್ದು ರೈತರು ಬ್ಯಾಂಕ್ ಖಾತೆ ಭೀಮ ಸಂಸ್ಥೆಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸಾಮಾನ್ಯ ಸೇವ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದೆಂದು ತಿಳಿಸಿದರು.
ನೊಂದಣಿಗೊಂಡ ರೈತರ ಬೆಳೆ ಆನಿಯಾದ ಸಂದರ್ಭದಲ್ಲಿ ಭೀಮ ಪರಿಹಾರ ಪಡೆಯಬಹುದಾಗಿದೆ ಬಿತ್ತನೆ ಫಲಗೊಂಡಲ್ಲಿ ಹಾಲಿರುವ ಬೆಳೆ ಹಾನಿಯದಲ್ಲಿ ಕ್ಲಯೋತರ ನಂತರ ನಷ್ಟ ಸ್ಥಳೀಯ ವಿಪತ್ತುಗಳು ಸಂಭವಿಸಿದ ವೇಳೆ ಯೋಜನೆ ಅಡಿ ಪರಿಹಾರ ನೀಡಲಾಗುತ್ತದೆ.ಈ ಸಂದರ್ಭದಲ್ಲಿ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಜಿ.ಎಂ.ಗೌತಮ್.ಹಾಗೂ ವಿವಿಧ ಗ್ರಾಮಗಳ ರೈತ ಮುಖಂಡರು ಗ್ರಾಮದ ರೈತರು ಉಪಸ್ಥಿತರಿದ್ದು ಮಾಹಿತಿ ಪಡೆದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030