ಬೈಕಿಗೆ ಲಾರಿ ಡಿಕ್ಕಿ,ಅಜ್ಜ ಮೊಮ್ಮಗ ಸಾವು.
ಕೂಡ್ಲಿಗಿ:-ಜು.8 ಬೈಕಿಗೆ ಲಾರಿ ಡಿಕ್ಕಿಯಾಗಿ ಅಜ್ಜ ಮೊಮ್ಮಗ ಮೃತ ಪಟ್ಟು ಮತ್ತೊಬ್ಬರು ಗಾಯಗೊಂಡ ಘಟನೆ ತಾಲೂಕಿನ ಕಕ್ಕುಪ್ಪಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.
ತಾಲೂಕಿನ ನಾಗರಹುಣಸೆ ಗ್ರಾಮದ ಭೀಮಪ್ಪ (55)ಆತನ ಮೊಮ್ಮಗ ಆದಿ(5) ಮೃತಪಟ್ಟಿದ್ದು.ಆರ್.ಪಿ.ವಿನಯ್ ಕುಮಾರ್ ಗಾಯಗೊಂಡಿದ್ದಾರೆ.
ಪಟ್ಟಣದ ವಿನಾಯಕ ಶಾಲೆಯಲ್ಲಿ ಎಲ್ ಕೆ ಜಿ ಓದುತ್ತಿದ್ದ ಆದಿಯನ್ನು ಕರೆದುಕೊಂಡು ಭೀಮಪ್ಪ ತನ್ನ ಸ್ವಗ್ರಾಮ ನಾಗರಹುಣಸೆ ಕಡೆ ಬೈಕಿನಲ್ಲಿ ಹೊರಟಿದ್ದರು.ಈ ವೇಳೆ ಜೊತೆಯಾದ ಅದೇ ಗ್ರಾಮದ ಆರ್ಪಿ ವಿನಯ್ ಕುಮಾರ್ ಬೈಕ್ ಚಾಲನೆ ಮಾಡಿಕೊಂಡು ಕಕ್ಕಪ್ಪಿಗ್ರಾಮದ ಬಳಿ ಹೋಗುತ್ತಿದ್ದರು. ಗುಡೇಕೋಟೆ ಕಡೆಯಿಂದ ಅತಿ ವೇಗ ಆ ಜಾಗೃಕತೆಯಿಂದ ಲಾರಿಯನ್ನು ಚಾಲನೆ ಮಾಡಿಕೊಂಡು ಬಂದ ಚಾಲಕ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಬಾಲಕ ಆದಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ಭೀಮಪ್ಪ ಹಾಗೂ ಆರ್ ಪಿ ವಿನಯ್ ಕುಮಾರ್. ಅವರನ್ನು ಚಿಕಿತ್ಸೆಗೆಂದು ಬಳ್ಳಾರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಭೀಮಪ್ಪ ಮೃತಪಟ್ಟಿದ್ದಾರೆ. ವಿನಯ್ ಕುಮಾರ್ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆದಿ ಮೂಲತ ಸಂಡೂರು ತಾಲೂಕಿನ ಚಿಕ್ಕಕೆರೆಯಾಗಿನಹಳ್ಳಿ ಗ್ರಾಮದವನಾಗಿದ್ದ ಆದಿ ತನ್ನ ತಾಯಿಯೊಂದಿಗೆ ತಾತನ ಮನೆಗೆ ಬಂದಿದ್ದ. ವಿನಯ್ ಕುಮಾರ್ ಮರಿಯಮ್ಮನಹಳ್ಳಿ ಪದವಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ…
ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030