ಗುಡೇಕೋಟೆ ಶುಭೋದಯ ವಿದ್ಯಾ ಮಂದಿರದಲ್ಲಿ 73 ನೇ ಗಣರಾಜ್ಯೋತ್ಸವ ಸಮಾರಂಭ.ಸಾಂವಿಧಾನಿಕ ಅಂಶ ಪಠ್ಯದಲ್ಲಿ ಜೋಡಿಸಿ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಶುಭೋದಯ ವಿದ್ಯಾಮಂದಿರದಲ್ಲಿ ನಡೆದ 73ನೇ ಗಣರಾಜ್ಯೋತ್ಸವದ ಕಾರ್ಯಕ್ರಮವನ್ನು ಬುಧವಾರ ಶಾಲಾ ಮುಖ್ಯಗುರುಗಳಾದ ಜಾಕೀರ್ ಹುಸೇನ್ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಿದರು.
ಬಳಿಕ ಮಾತನಾಡಿದ ಶುಭೋದಯ ವಿದ್ಯಾ ಮಂದಿರ ಆಡಳಿತ ಮಂಡಳಿ ಅಧ್ಯಕ್ಷರಾದ ಶೋಭಾರಾಣಿ ಮಾತನಾಡುತ್ತ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ದೇಶದ ಆಗುಹೋಗುಗಳ ಬಗೆಗೆ ಅರಿತುಕೊಳ್ಳಬೇಕು. ಸಂವಿಧಾನಿಕ ಅಂಶಗಳನ್ನು ಪಠ್ಯಗಳಲ್ಲಿ ಸರ್ಕಾರ ಜೋಡಿಸಬೇಕು ಈ ಮೂಲಕ ಗಣರಾಜ್ಯೋತ್ಸವದ ಮಹತ್ವ ಮಕ್ಕಳಿಗೆ ತಿಳಿಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಶೋಭಾರಾಣಿ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿರುವುದು ಗಮನಾರ್ಹ ಎಂದರು.
ಮುಖ್ಯಗುರುಗಳಾದ ಜಾಕಿರ್ ಹುಸೇನ್ ಮಾತನಾಡಿ ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಮಹತ್ವದ ನಿರ್ಧಾರಗಳು ಇಂದು ಭಾರತದ ಸಂವಿಧಾನವಾಗಿ ರಚಿಸಲ್ಪಟ್ಟಿದೆ. ಇಂತಹ ಮಹತ್ವಪೂರ್ಣ ದಿನವನ್ನು ಭಾರತ ದೇಶ ಗಣರಾಜ್ಯ ದಿನವನ್ನಾಗಿ ಆಚರಿಸುತ್ತಿದೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಗುಡೇಕೋಟೆ ಶುಭೋದಯ ವಿದ್ಯಾಮಂದಿರದ ಆಡಳಿತಾಧಿಕಾರಿ ಶೋಭಾರಾಣಿ. ಮುಖ್ಯಗುರುಗಳಾದ ಜಾಕಿರ್ ಹುಸೇನ್. ಶಿಕ್ಷಕರಾದ ಜ್ಯೋತಿ. ಭಾಗ್ಯಮ್ಮ .ಶಿಲ್ಪ .ಜಯಲಕ್ಷ್ಮಿ. ಭಾಗ್ಯಲಕ್ಷ್ಮಿ .ಬೋರಮ್ಮ. ಸುಮಲತಾ. ಸೇರಿದಂತೆ ನಿರೂಪಣೆ ವಿದ್ಯಾರ್ಥಿ ಸುವರ್ಣ ಸ್ವಾಗತ ತಿಪ್ಪೇಸ್ವಾಮಿ ಯವರು ನೆರವೇರಿಸಿದರು. ವಂದನಾರ್ಪಣೆ ಪುನೀತ್ ಕುಮಾರ್ .ನೆರವೇರಿಸಿದರು.
ವರದಿ ಡಿ ಎಂ ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030