ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ.
ರಾಮಸಾಗರ:- ಗುಡೆಕೋಟೆ ಹೋಬಳಿ ರಾಮಸಾಗರ ಹಟ್ಟಿ ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ 15 ರಿಂದ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕರೋನೋ ವ್ಯಾಕ್ಸಿನ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷರಾದ ರಾಜಶೇಖರ್ ಅವರು ಮಾತನಾಡಿ ಕರೋನ ಎಂಬ ಹೆಮ್ಮಾರಿದಿನದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು,ಜನರ ಜೀವನ ಜೊತೆ ಆಟವಾಡುತ್ತಿದೆ, ಈಗಾಗಲೇ ನಾವು ತುಂಬಾ ಕರೋನಾ ಸಂಕಷ್ಟಗಳನ್ನು ಅನುಭವಿಸಿದ್ದೇವೆ, ಈಗ ಸರ್ಕಾರ ಆದೇಶ ಮಾಡಿರುವುದರಿಂದ, 15ರಿಂದ 18 ವರ್ಷದ ಮಕ್ಕಳಿಗೆ ಕರೋನವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿಉಚಿತವಾಗಿ. ಕೂ ವ್ಯಾಕ್ಸಿನ್ ಲಸಿಕೆಯನ್ನು ಹಾಕಲಾಗುತ್ತದೆ ಇದರ ಸದುಪಯೋಗವನ್ನು ಪಡೆದುಕೊಂಡು, ಈ ವೈರಾಣು ಹರಡದಂತೆಸುರಕ್ಷತೆ ವಹಿಸರಿ ತಪ್ಪದೇ ಮಕ್ಕಳು ಲಸಿಕೆಯನ್ನು ಪಡೆಯಿರಿ ಎಂದು ಈ ಕಾರ್ಯಕ್ರಮ ಕುರಿತು ಮಾತನಾಡಿದರು, ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ರುಕ್ಮಿಣಿಬಾಯಿ, ಪವಿತ್ರ,, ಸುದರ್ಶನ ನಿಜಗುಣ ಪ್ಪ ಸಿದ್ದೇಶ,ಭೈರವ ಶೆಟ್ಟಿ,ಬಸವರಾಜ್, ಮತ್ತುಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು. ಶಾಲೆಯ ಮುಖ್ಯಗುರುಗಳು ಸಹಶಿಕ್ಷಕರು ಶಾಲೆಯ ಮಕ್ಕಳು. ಗ್ರಾಮ ಪಂಚಾಯತಿ ಸದಸ್ಯರು ಎಸ್ಡಿಎಂಸಿ ಸದಸ್ಯರು. ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು…
ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030