ಗುಡೇಕೋಟೆಯಲ್ಲಿ ಮಾಸ್ಕ್ ಹಾಕದಿದ್ದರೆ ಸ್ಥಳದಲ್ಲೆ ಕೋರೊನಾ ಟೆಸ್ಟ್.
ಸಾರ್ವಜನಿಕರಿಗೆ ಕೂಡ್ಲಿಗಿ ತಹಶೀಲ್ದಾರ್ ಟಿ.ಜಗದೀಶ್ ಎಚ್ಚರಿಕೆ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿಂದು ಬೆಳಿಗ್ಗೆ ತಾಲೂಕು ಆಡಳಿತ. ಗ್ರಾಮ ಪಂಚಾಯಿತಿ ಆಡಳಿತ.ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಹಮ್ಮಿಕೋಂಡಿದ್ದ ಕರೋನಾ ಜಾಗೃತಿ ಜಾಥದಲ್ಲಿ ತಹಶೀಲ್ದಾರರು ಹಾಗೂ ತಾಲೂಕಿನ ಇ. ಓ. ಜಿ.ಎಂ.ಬಸಣ್ಣ ನವರು ಸಾರ್ವಜನಿಕರಿಗೆ ಪೋಲೀಸ್ ರ ಸಹಾಯದಿಂದ ಅನಗತ್ಯವಾಗಿ ಓಡಾಡುವಾ ವಾಹನ ಸವಾರರಿಗೆ ರಸ್ತೆ ಪಕ್ಕದಲ್ಲೇ ಕರೋನಾ ಟೆಸ್ಟ್ ಮಾಡಿಸುವ ಮೂಲಕ ಬಿಸಿ ಮುಟ್ಟಿಸಿದರು.
ತಾಲೂಕಿನಲ್ಲಿ ದಿನೆ ದಿನೇ ಕರೋನಾ ಸೋಂಕಿತರು ಹೆಚ್ಚುತ್ತಿದ್ದು ಮಾಸ್ಕ್ ಧರಿಸದೇ ಓಡಾಡೋರ ಸಂಖ್ಯೆಯೂ ಹೆಚ್ಚಾಗಿದೆ ಈ ಹಿಂದೆ ದಂಡಕಟ್ಟಿದ್ದರೂ ದಂಡವನ್ನು ಲೆಕ್ಕಿಸದೇ ಮಾಸ್ಕ್ ಯಾರು ಹಾಕಲ್ವೋ ಅವರಿಗೆ ರ್ಯಾಪಿಡ್ ಕಿಟ್ ಮೂಲಕ ಸ್ಥಳದಲ್ಲೆ ಕೋರೊನಾ ಟೆಸ್ಟ್ ಮಾಡಿಸಿ ಕೋರೊನಾ ಫಲಿತಾಂಶ ನೀಡುವಾ ಎಚ್ಚರಿಕೆಯನ್ನು ತಹಶೀಲ್ದಾರರು ನೀಡಿದರು.
ಜನರು ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸಿಕೋಂಡು ಬಂದರೆ ಸೊಂಕು ತಡೆಗಟ್ಟಲು ಅನುಕೂಲಕರ ಆಗಲಿದೆ ಎಂದು ತಾಲೂಕು ಪಂಚಾಯಿತು ಇ.ಓ.ಜಿ.ಎಂ.ಬಸಣ್ಣ ನವರು ಸಲಹೆ ನೀಡಿದರು. ಈ ಸಂಧರ್ಭದಲ್ಲಿ ತಾಲೂಕು ಧಂಡಾಧಿಕಾರಿ ಟಿ.ಜಗದೀಶ್. ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಆಧಿಕಾರಿ ಜಿ.ಎಂ.ಬಸಣ್ಣ. ಗುಡೇಕೋಟೆ ಪೋಲೀಸ್ ಠಾಣೆಯ ಪಿ.ಎಸ್.ಐ.ಶಂಕ್ರಪ್ಪ ಎಸ್ ಲಮಾಣಿ. ಆರೋಗ್ಯ ಇಲಾಖೆಯ ಆಧಿಕಾರಿ ಡಾ.ಶ್ರೀಧರಬಾಬು.ಎ.ಎಸ್.ಐ. ಎಂ.ರವಿ. ಕಂದಾಯ ಇಲಾಖೆಯ ಹೆಚ್.ಹರೀಶ್.ವಿರೇಶ್ ಬೇವೂರು.ಗ್ರಾಮ ಸಹಾಯಕರಾದ ಸುಂದರ್ ಕೃಷ್ಣ.ಕೆಇಬಿ ಗುತ್ತಿಗೆದಾರರಾದ ಗೋವಿಂದಪ್ಪ.ಪೇದೆಗಳಾದ.ಶಶಿ.ಮಾರುತಿ.ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗ.ಪೋಲೀಸ್ ಠಾಣೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿ ವರ್ಗ ಕರೋನಾ ಜಾಗೃತಿ ಜಾಥದಲ್ಲಿ ಇಲಾಖೆಗಳ ಆಧಿಕಾರಿಗಳು ಭಾಗಿಯಾಗಿದ್ದರು.
ವರದಿ.ಡಿ. ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030