. ಒಂದು ವೇಳೆ,
ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಗ್ರಾಮಸ್ಥರು ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ಧಾರವಾಹಿ ಮಹಾನಾಯಕ ಬ್ಯಾನರ್ ಅನಾವರಣಗೊಳಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ನಾನಾ ಸಂಘಟನೆಯ ಕಾರ್ಯಕರ್ತರು ಬೃಹತ್ ಬ್ಯಾನರ್ ಅನಾವರಣಗೊಳಿಸಿ ಡಾ.ಬಾಬಾ ಸಾಹೇಬರ ಕುರಿತು ಜೀವನ ಆಧಾರಿತ
ಆಧಾರಿತ ಧಾರವಾಹಿ ಪ್ರಸಾರ ಮಾಡುತ್ತಿರುವ ಕನ್ನಡ ವಾಹಿನಿಯ ಕಾರ್ಯವೈಖರಿ ಕುರಿತು ಅಭಿನಂಧನೆಗಳನ್ನು ಸಲ್ಲಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಒಬ್ಬ ಮಹಾನ್ ತತ್ವಜ್ಞಾನಿಯಾಗಿದ್ದು, ಸಮಾಜ ನಿರ್ಮಾಣಕ್ಕಾಗಿ ಹಗಲಿರಳು ಶ್ರಮಿಸಿದ್ದರು. ಅವರಲ್ಲಿದ್ದ ಹೋರಾಟದ ಚಲ ಮತ್ತು ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹೇಳಿದರು. ಸಂದರ್ಭದಲ್ಲಿ ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷ ಪ್ರಕಾಶ, ಮಾಜಿ ಅಧ್ಯಕ್ಷ ತಮ್ಮಳ ನಾಯಕ, ಜಗದೀಶ, ಯರಿಸ್ವಾಮಿ, ನಾಗೇಂದ್ರ, ಚೀಟಿ ತಿಪ್ಪೇಸ್ವಾಮಿ, ರಾಮಮೂರ್ತಿ, ರಾಮಾಂಜಿನಿ, ರುದ್ರಮುನಿ, ಶಿವಣ್ಣ ರವಿ, ಶರಣೇಶ, ತಿಪ್ಪೇಶ, ಮಲ್ಲಿ ಬಿಲ್ಕಲೆಕ್ಟರ್ ತಿಪ್ಪೇಸ್ವಾಮಿ, ಹಿರಿಯಣ್ಣ ಮತ್ತಿತರರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030