ಗಂಗಮ್ಮನಹಳ್ಳಿ:ಶ್ರೀಕರೋನಮ್ಮಳನ್ನು ಕಳುಹಿಸಲಾಯಿತು- ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಗಂಗಮ್ಮನಹಳ್ಳಿ ಗ್ರಾಮದಲ್ಲಿ, ಗ್ರಾಮದವರೆಲ್ಲ ಸಾಮೂಹಿಕವಾಗಿಸಂಕಲ್ಪ ತೊಟ್ಟು ಮಡಿ ಮುಡಿಯಿಂದಲೇ ಸಿಹಿ ಖಾಧ್ಯಗಳೊಂದಿಗೆ.ಪೂಜಾಸಾಮಾಗ್ರಿ ಹಾಗೂ ಉಡಿ ಪದಾರ್ಥಗಳೊಂದಿಗೆ ಶ್ರದ್ದಾಭಕ್ತಿಯಿಂದ. ಮಂಗಳ ಸಂಕೇತವಾದ ಮೊರದಲ್ಲಿಟ್ಟುಕೊಂಡು ಮೌನವ್ರತದೊಂದಿಗೆ,ಗ್ರಾಮದ ಗಡಿರೇಖೆಯಲ್ಲಿ ನಿಗದಿ ಪಡಸಿರುವ ದೇವೀಸ್ವರೂಪವೆಂದೇ ಗುರುತಿಸಲಾದ.ಬೇವಿನ ಮರಡಿ ಉಡಿ ಅರ್ಪಿಸುವ ಮೂಲಕ ಕರೋಳಮ್ಮಳನ್ನು ಸಂತೃಪ್ತಿಗೊಳಿಸಿ, ಕಳುಹಿಸಿಕೊಡೋ ಮೂಲಕ ಗ್ರಾಮವನ್ನ ಕರೋನಾ ಮಾರಿಯಿಂದ ಮುಕ್ತಿಗೊಳಿಸಿರುವ ಮನೋಧೈರ್ಯತಾಳೋ ಗ್ರಾಮೀಣ ಹಬ್ಬ ಆಚರಣೆ ಇದಾಗಿದೆ.ಇದನ್ನು ಗಂಗಮ್ಮನಹನಳ್ಳಿಯ ಗ್ರಾಮಸ್ರರೆಲ್ಲರೂ ಸ್ಚಯಂ ಪ್ರೆರಿತರಾಗಿ,ಕರೋನಾ ನಿಯಮಗಳ ಪಾಲನೆಯೊಂದಿಗೆ ಗ್ರಾಮಸ್ತರೆಲ್ಲರೂ ಶ್ರೀಕೊರೋನಮ್ಮ ದೇವಿಯನ್ನು, ಸಂಪ್ರದಾಯವಾಗಿ ಆರಾಧಿಸಿ ಪೂಜಿಸಿ ಗ್ರಾಮದಿಂದ ಬೀಳ್ಕೊಡಲಾಗಿದೆ. ಸಿಹಿಖಾಧ್ಯದ ಹಬ್ಬ ಇದಾಗಿದೆ ಸಾಪ್ರದಾಯಿಕ ಕಟ್ಟಳೆಯೊಂದಿಗೆ ಆರೋಗ್ಯ ಇಲಾಖೆಯ ನಿಯಪಾಲನೆಯಿಂದಿಗೆ ವಿಧಿವತ್ತಾಗಿ ಗ್ರಾಮದ ಹೊರವಲಯಕ್ಕೆ ಸಾಮೂಹಿಕವಾಗಿ ಕಳುಹಿಸಲಾಯಿತು.
ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030