*ಕೊಟ್ಟೂರು ತಾಲೂಕು ಮಸಣ ಕಾರ್ಮಿಕರ ತಾಲೂಕು ಘಟಕದ ವತಿಯಿಂದ ಆರೋಗ್ಯವಿಮೆ ಕುರಿತಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೊಟ್ಟೂರು ತಾಲೂಕು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು*
ಕೋವಿಡ್ 19 ಎರಡನೆಯ ಅಲೆ ದೇಶದಾದ್ಯಂತ ವ್ಯಾಪಕವಾಗಿ ಹರಡುವುದರಿಂದ ಕೊಟ್ಟೂರು ತಾಲೂಕು ಮಸಣ ಕಾರ್ಮಿಕ ಘಟಕದಿಂದ ಆರೋಗ್ಯ ರಕ್ಷಣೆ ಸೌಲಭ್ಯ ಕುರಿತಂತೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಸಣ ಕಾರ್ಮಿಕ ಘಟಕದ ಕಾರ್ಯದರ್ಶಿ ರುದ್ರೇಶ್ ಮಾತನಾಡಿ ಕರೋನವೈರಸ್ ವ್ಯಾಪಕವಾಗಿ ಹರಡುವುದರಿಂದ ಮಸಣ ಕಾರ್ಮಿಕರು ಜೀವನ ನಡೆಸುವುದು ತುಂಬಾ ತೊಂದರೆ ಯಾಗಿರುತ್ತದೆ ಕಾರಣ ಆರೋಗ್ಯರಕ್ಷಣೆ ವಿಮಾ ಸೌಲಭ್ಯ ಕುರಿತಂತೆ ಪ್ರತಿ ಕಾರ್ಮಿಕರಿಗೆ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹಧನ ಬಡ ಕಾರ್ಮಿಕರಿಗೆ ಭೂಮಿ ಕಲ್ಪಿಸುವುದು ಹಾಗೂ ರೇಷನ್ ಕಾರ್ಡ್ ವಿತರಿಸುವುದು ಕುರಿತಂತೆ ವಿವಿಧ ಬೇಡಿಕೆಗಳ ನ್ಯಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು . ಈ ಸಂದರ್ಭದಲ್ಲಿ ತಾಲೂಕು ಮಸಣ ಕಾರ್ಮಿಕರ ತಾಲೂಕು ಘಟಕದ ಅಧ್ಯಕ್ಷ ಮೂಗಪ್ಪ, ಉಪಾಧ್ಯಕ್ಷೆ ಮೂಗಮ್ಮ ಸಂಚಾಲಕರಾದ ಹನುಮಂತಪ್ಪ ಉಪಸ್ಥಿತರಿದ್ದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕೊಟ್ಟೂರು ತಾಲೂಕಿನ ಶಿರಸ್ತೇದಾರ ನೀಲಮ್ಮ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030