ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಭಾರತ ಸ್ವತಂತ್ರ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ.
ಕೂಡ್ಲಿಗಿ ಪಟ್ಟಣದ ಚಂದ್ರಶೇಖರ್ ಅಜದ್ ರಂಗಮಂದಿರದಲ್ಲಿ ಆಯೋಜಿಸಿದ್ದ. ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಭಾರತ ಸ್ವತಂತ್ರ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವರಾದ ಶ್ರೀ ಸಂತೋಷ್ ಲಾಡ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಸಂಡೂರು ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಈ ತುಕಾರಾಂ. ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಬಿ ಮುಂಡ್ರಿಗಿ ನಾಗರಾಜ. ಮಾತನಾಡಿ. ಬರುವ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 14 ರಂದು ಸಂತೋಷ್ ಫೌಂಡೇಶನ್ ವತಿಯಿಂದ ಕೂಡ್ಲಿಗಿಯ ವಾಲ್ಮೀಕಿ ಭವನದಿಂದ ಗಾಂಧಿ ಚಿತಾಭಸ್ಮ ರವರಿಗೆ ಕಾಲು ನಡಿಗೆಯ ಮುಖಾಂತರ ಮಧ್ಯರಾತ್ರಿ 12 ಗಂಟೆಗೆ ಫ್ಲಾಗ್ ಆರಿಸಲಾಗುವುದು ಈ ಸಭೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರನ್ನು ಕರೆತರುವ ಉದ್ದೇಶವಿದ್ದು ಈ ಒಂದು ಸಮಾರಂಭಕ್ಕೆ ತಾವುಗಳೆಲ್ಲರೂ ಆಗಮಿಸಬೇಕೆಂದು ಇವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದು ಹಳ್ಳಿ ಗೌಡರವರು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ ರಘು ಗುಜ್ಜಲ್ ಅವರು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಟೇಶ್. ನಾಗಮಣಿ ಜಿಂಕಲ್.ರವರು ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ನೇತ್ರಮ್ಮ ಜಿ ಓಬಣ್ಣ. ಹಾಗೂ ದಲಿತ ಮುಖಂಡರಾದ ಬಳ್ಳಾರಿ ಗುರುದೇವ. ಹಾಗೂ ಇನ್ನೂ ಅನೇಕ ಸಂತೋಷ್ ಲಾಡ್ ಫೌಂಡೇಶನ್ ಬಳಗದವರು ಹಾಗೂ ದಲಿತ ಮುಖಂಡರುಗಳು ಹಾಗೂ ಯುವಕರು ಈ ಒಂದು ಸಭೆಗೆ ಉಪಸ್ಥಿತರಿದ್ದರು.
ವರದಿ ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030