ಕೂಡ್ಲಿಗಿ:ಬಸ್ ನಿಲ್ದಾಣದಲ್ಲಿ ಸತ್ತನಾಯಿಯದೇ ದುರ್ನಾಥ…!!!

Listen to this article

ಕೂಡ್ಲಿಗಿ:ಬಸ್ ನಿಲ್ದಾಣದಲ್ಲಿ ಸತ್ತನಾಯಿಯದೇ ದುರ್ನಾಥ.

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ. ನಾಣ್ಯಪುರ, ಹಗರಿಬೊಮ್ಮನಹಳ್ಳಿ ಬಸ್ ನಿಲ್ಲೋ ಸ್ಥಳದ ಹತ್ತಿರ ನಾಯಿ ಸತ್ತು ಬಿದ್ದಿದೆ. ಅದನ್ನು ತೆರವುಗೊಳಿಸುವ ಕನಿಷ್ಠ ಜವಾಬ್ದಾರಿಯನ್ನು ನಿಲ್ದಾಣದ ಕಾರ್ಯ ನಿರ್ವಹಣಾಧಿಕಾರಿ ಕ್ರಮಕೈಗೊಂಡಿಲ್ಲ, ನಿರ್ಲಕ್ಷ್ಯ ತೋರಿದ್ದಾರೆಂದು ಪ್ರಯಾಣಿಕರು ಹಾಗೂ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ತ ನಾಯಿಯ ಕಳೆಬರದಿಂದ ದುರ್ನಾಥ ಬೀರುತ್ತಿದ್ದು ಮೂಗು ಮುಚ್ಚಿಕೊಂಡೇ ಇರುವಂತಹ ಹುಸಿರುಗಟ್ಟಿದ ವಾತಾವರಣ ನಿರ್ಮಾಣ ವಾಗಿದೆ, ಆದರೂ ಅಧಿಕಾರಿ ನಿರ್ಲಕ್ಷ್ಯ ತೋರಿರುವುದು ಅವರ ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ನಿಲ್ದಾಣದ ಸುತ್ತ ಮುತ್ತ ಕಸದ ರಾಶಿ ನಿರ್ಮಾಣವಾಗಿದ್ದು ನೈರ್ಮಲ್ಯತೆ ಕಾಣೆಯಾಗಿದೆ, ಕಸ ಕೊಳತು ನಾರುತ್ತಿದೆ, ಮಲ ಮೂತ್ರದಿಗಳಿಂದಾಗಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ ಎಂದು ನಾಗರೀಕರು ದೂರಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿಯವರ ನಿರ್ಲಕ್ಷ್ಯ ಧೋರಣೆ ಯಿಂದಾಗಿ ಸರ್ಮಪಕವಾದ ನಿರ್ವಹಣೆ ಕಾಣದೇ, ಬಸ್ ನಿಲ್ದಾಣದಲ್ಲಿ ಸ್ವಚ್ಚ ಕುಡಿಯೋ ನೀರು ಪೂರೈಸದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ…

ವರದಿ. ವಿ. ಜಿ. ವೃಷಬೇಂದ್ರಿ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend