ಸಾಹಿತಿ,ಉಪನ್ಯಾಸಕಿ ಈರಮ್ಮರಿಗೆ “ಅಕ್ಷರದವ್ವ ಸಾವಿತ್ರಿಬಾಯಿ ಪುಲೆ” ಪ್ರಶಸ್ತಿ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಅಮ್ಮನಕೇರಿ ಗ್ರಾಮದವರಾದ,ಸಾಹಿತಿಗಳು, ಸಮಾಜ ಸೇವಕರು ಹಾಗೂ ಉಪನ್ಯಾಸಕರಾದ ಶ್ರೀಮತಿ ಆರ್. ಈರಮ್ಮರವರು.ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ನೀಡಲ್ಪಡುವ, “ಅಕ್ಷರದವ್ವ ಸಾವಿತ್ರಿಬಾಯಿ ಪುಲೆ” ರಾಜ್ಯಮಟ್ಟದ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.ಶಿಕ್ಷಣ ಕ್ತೇತ್ರದಲ್ಲಿ ವಿಶಿಷ್ಟವಾಗಿ ಸೇವೆಸಲ್ಲಿಸಿದವರಿಗೆ,ಗೌರವ ಪೂರ್ವಕವಾಗಿ ನೀಡುವ ಪ್ರಶಸ್ತಿ ಇದಾಗಿದ್ದು,ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆರವರ ಸ್ಮರಣಾರ್ಥ,ಪ್ರತಿ ವರ್ಷದ ಅವರ ಜನ್ಮ ದಿನದಂದು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ.ದಲಿತ ವಿದ್ಯಾರ್ಥಿ ಪರಿಷತ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಶ್ರೀಮತಿ ಆರ್.ಈರಮ್ಮರವರ ಸಮಾಜ ಸೇವೆ ಹಾಗೂ ಶೈಕ್ಷಣಿಕ ಸೇವೆಯನ್ನ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದ್ದು, ವಿಜಯಪುರದಲ್ಲಿ 2022ರ ಜನ 3ರಂದು ಜರುಗಲಿರುವ,ಜ್ಯೋತಿ ಬಾಯಿಪುಲೆ ರವರ ಜನ್ಮದಿನದಂದು ಪ್ರಶಸ್ತಿಯನ್ನು,ಶ್ರೀಮತಿ ಆರ್.ಈರಮ್ಮರಿಗೆ ನೀಡಿ ಗೌರವಿಸಲಾಗುವುದೆಂದು ದಲಿತ ವಿದ್ಯಾರ್ಥಿ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030