ಪ್ರಾರ್ಥನೆ ಮೂಲಕ ಶಾಂತಿ ನೆಮ್ಮದಿ ಸಾಧ್ಯ-ಏಸು ಆರಾಧಕ ಪರಶುರಾಮ.
ವಿಜನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶಾಲೋಮ್ ಪ್ರಾರ್ಥನಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು. ಏಸು ಸೇವಕರದ ಪರುಶುರಾಮ್ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಮಾತನಾಡಿ, ಪ್ರಪಂಚದಲ್ಲಿ ಅತ್ಯಮೂಲ್ಯವಾದ ಅನುಭವ,ಬೆಲೆ ಕಟ್ಟಲು ಅಸಾಧ್ಯವಾದ ಎಲ್ಲಿಯೂ ದೊರಕಲಾರದ್ದು ನೆಮ್ಮದಿ ಹಾಗೂ ಶಾಂತಿ, ನೆಮ್ಮದಿ ಶಾಂತಿ ಎಲ್ಲಿಯೂ ಸಿಗಲಾರದ ಬೆಲೆ ಕಟ್ಟಲಾಗದಂತಹ ಅತ್ಯಮೂಲ್ಯವಾದವುಗಳಾಗಿವೆ.ಅದನ್ನು ದೇವ ಧೂತ ಏಸುವಿನ ಪ್ರಾರ್ಥನೆ ಮೂಲಕ ಮಾತ್ರ,ನಮ್ಮಲ್ಲಿ ನಾವು ಅದನ್ನು ಕಂಡುಕೊಳ್ಳಬಹುದಾಗಿದೆ ಎಂದರು.ಮನುಷ್ಯ ಏನೆಲ್ಲಾ ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ್ದಾನೆ ಯಾದರೂ ಹುಟ್ಟು ಸಾವುಗಳ ಗುಟ್ಟು ಕಂಡುಹಿಡಿದಿಲ್ಲಾ,ಅದು ಪ್ರಕೃತಿ ನಿಯಮವಾಗಿದೆ ನಾವು ಪ್ರಕೃತಿಯ ಮುಂದೆ ಏನೂ ಅಲ್ಲ,ಎಲ್ಲರೂ ಸೌಹಾರ್ದತೆಯನ್ನ ಹೊಂದಬೇಕಿದೆ ಮತ್ತು ಪ್ರಕೃತಿಯನ್ನ ಗೌರವಿಸಬೇಕು ಪ್ರೀತಿಸಬೇಕು ಎಂದರು. ನೂರಾರು ಮಹಿಳೆಯರು ಯುವಕ-ಯುವತಿಯರು,ಮಕ್ಕಳು ನಾಗರೀಕರು ಸ್ವಯಂ ಪ್ರೇರಿತರಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030