ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಜುಟ್ಲಲಿಂಗನಹಟ್ಟಿ:ವಜಾಗೊಂಡಿದ್ದ ಪೇದೆ ಅಸ್ವಸ್ಥತೆಯಿಂದ ಮೃತ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಜುಟ್ಲ ಲಿಂಗನಹಟ್ಟಿ ಗ್ರಾಮದಲ್ಲಿ, ತೀರಾ ಅಸ್ವಸ್ಥತೆಯಿಂದ ಬಳಲುತಿದ್ದ ವ್ಯಕ್ತಿ ಮೃತ ಪಟ್ಟಿರುವ ಘಟನೆ ಜ17ರಂದು ಜರುಗಿದೆ.
ಮೃತನು ಬಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕು ಹುಣಸಿಹಾಳ್ ಪಿಬಿ ಗ್ರಾಮದ, ಗಂಗಾಧರ(35) ತಂದೆ ಲೇಟ್ ಶರಣಪ್ಪ ಎಂದು ತಿಳಿದುಬಂದಿದೆ.ಈತನು ಈ ಮುಂಚೆ ಬಾಗಲಕೋಟೆಯಲ್ಲಿ ಮೀಸಲು ಪೊಲೀಸ್ ಪೇದೆ ಆಗಿದ್ದು,ವಿಪರೀತ ಮಧ್ಯ ವ್ಯಸನಕ್ಕೀಡಾಗಿದ್ದ ಎನ್ನಲಾಗಿದೆ.
ಈತ ಈಗಾಗಲೇ ಕರ್ಥವ್ಯದಿಂದ ವಜಾ ಆಗಿದ್ದನೆಂದು ತಿಳಿದುಬಂದಿದೆ. ತದನಂತರದಲ್ಲಿ ಈತನು ಮಾನಸಿಕ ಖಿನ್ನತೆಯಿಂದ ಬಳಲುತಿದ್ದ,ತದನಂತರದಲ್ಲಿಮಾನಸಿಕ ಅಸ್ವಸ್ಥನಂತೆ ವರ್ಥಿಸುತ್ತಿದ್ದನೆಂದು.
ಕೆಲ ದಿನಗಳಿಂದ ಹೊಸಹಳ್ಳಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದ ಎನ್ನಲಾಗಿದೆ,ಕೆಲ ದಿನಗಳಿಂದ ಆಹಾರ ನೀರು ತ್ಯಜಿಸಿದ್ದನೆಂದು ಪ್ರತ್ಯಕ್ಷ್ಯದರ್ಶಿಗಳು ದೃಢಪಡಿಸಿದ್ದಾರೆ. ಇದ್ದರಿಂದಾಗಿ ತೀರಾ ಅಸ್ವಸ್ಥನಾಗಿದ್ದ ಗಂಗಾಧರ,ಜ17ರಂದು ಜುಟ್ಲಲಿಂಗನಹಟ್ಟಿ ಗ್ರಾಮದ ಹೊಲವೊಂದರಲ್ಲಿ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.ಈ ಸಂಬಂಧ ಮೃತನ ಪತ್ನಿ ನೀಡಿದ ಹೇಳಿಕೆಯನ್ವಯ, ಹೊಸಹಳ್ಳಿ ಠಾಣೆಯ ಮುಖ್ಯಪೇದೆ ಬಿ.ಮೋಹನ್ ಪ್ರಕರಣ ದಾಖಲಿಸಿಕೊಂಡಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030