*ವಿರುಪಾಪುರ:ಎಲ್&ಟಿ ಅವೈಜ್ಞಾನಿಕ ಕಾಮಗಾರಿ, ಮನೆಗಳಿಗೆ ನೀರು*-
ವಿಜಯನಗರ ಜಿಲ್ಲೆ ಕೂಡ್ಲಿಗಿ ವಿರುಪಾಪುರ ಗ್ರಾಮದಲ್ಲಿ,ಮೇ 19ರಂದು ರಾತ್ರಿ ಸುರಿದ ಮಳೆಯಿಂದಾಗಿ.ನೀರು ಗ್ರಾಮದ ಹಲವು ಮನೆಯಂಗಳಕ್ಕೆ ನುಗ್ಗಿ ಜೀವನ ಅಸ್ಥವ್ಯಸ್ತವನ್ನಾಗಿಸಿದೆ,
ರಸ್ಥೆ ನಿಮಾರ್ಣದ ವೇಳೆ ಅನುಸರಿಸಿರುವ ಅವೈಜ್ಞಾನಿಕತೆಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.ನೂತನ ರಸ್ಥೆ ಬದಿಯಲ್ಲಿ ರಾಜಕಾಲುವೆ ನಿರ್ಮಿಸಬೇಕಿತ್ತು ನಿರ್ಮಿಸಿಲ್ಲ,ಇದರಿಂದಾಗಿ ಮಳೆ ನೀರು ರಸ್ಥೆಬದಿಯಲ್ಲಿರುವ ತೆಗ್ಗು ಪ್ರದೇಶದ 20 ಮನೆಗಳಿಗೆ ನುಗ್ಗುತ್ತಿದೆ. ಕಲುಷಿತ ನೀರು ಮನೆಗಳಿಗೆ ನುಗ್ಗಿ ನಿಂತು ಸಾಂಕ್ರಮಿಕ ರೋಗ ಹರಡುತ್ತಿದೆ,ಕರೋನಾದಂತಹ ಈ ದುಸ್ಥಿತಿಯಲ್ಲಿ ಮನೆಯಂಗಳದಲ್ಲಿ ನೀರು ನಿಂತು ರೂಗ ಋಜನಿ ಹರಡುವ ಭೀತಿ ಸೃಷ್ಟಿಯಾಗಿದೆ. ಇದರಿಂದಾಗಿ ಪ್ರತಿ ಮಳೆಗಾಲದಲ್ಲಿ 20ಕುಟುಂಬಗಳು ನೆಮ್ಮದಿ ಕಳೆದುಕೊಳ್ಳುತಿದ್ದು,ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.ರಸ್ಥೆ ನಿರ್ಮಣ ಮಾಡಿರುವ ಎಲ್ ಅಂಡ್ ಟಿ ಕಂಪನಿ ಅವೈಜ್ಞಾನಿಕ ರಸ್ಥೆ ಕಾಮಗಾರಿಯೇ ಈ ಅವಾಂತರಕ್ಕೆ ಕಾರಣವಾಗಿದೆ, ಅಂಡರ್ ಪಾಸಿಂಗ್ ನಲ್ಲಿ ಬೃಹತ್ ತೆಗ್ಗು ನಿರ್ಮಾಣವಾಗಿದೆ.ನೀರು ನಿಂತು ವಾಹನ ಸಂಚಾರಕ್ಕೆ ಮಾತ್ರವಲ್ಲ ಪಾದಾಚಾರಿಗಳು ಸಂಚರಿಸಲಾಗುತ್ತಿಲ್ಲ,ರಸ್ಥೆ ನಿರ್ಮಾಣವಾದಾಗಿನಿಂದ ಇದೇ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸೂಕ್ತ ಕ್ರಮಕ್ಕಾಗಿ ಹಲವು ಬಾರಿ ಕಂಪನಿಯವರ ಗಮನಕ್ಕೆ ತರಲಾಗಿದೆ,ಸಂಬಂಧಿಸಿದ ತಾಲೂಕು ಮಟ್ಟದ ಇಲಾಖಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಪ್ರಯೋಜನವಾಗಿಲ್ಲ.
ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜವಾಬ್ದಾರಿ ತೋರುತ್ತಿಲ್ಲ,ಈ ಭಾಗದ ಜಿಲ್ಲಾ ಪಂಚಾಯ್ತಿ ತಾಲೂಕು ಪಂಚಾಯ್ತಿ ಜನಪ್ರತಿನಿಧಿಗಳು.
ಪಕ್ಷಗಳ ಮುಖಂಡರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ,ಅವರೆಲ್ಲಾ ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ಈ ಸಮಸ್ಯೆ ಬಗೆಹರಿಸುವಲ್ಲಿ ಇಚ್ಚಾಶಕ್ತಿ ತೋರಬೇಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ತಾಲೂಕು ಪಂಚಾಯ್ತಿ ಅಧಿಕಾರಿ ಶೀಘ್ರವೇ ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕು,ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನ ಕೈಗೊಳ್ಳಬೇಕಿದೆ ನಿರ್ಲಕ್ಷ್ಯ ತೋರಿದ್ದಲ್ಲಿ,ಅಧಿಕಾರಿಗಳ ಜಿಲ್ಲಾಧಿಕಾರಿಗಳಲ್ಲಿ ಲಿಖಿತ ದೂರು ನೀಡಲಾಗುವುದೆಂದು ಗ್ರಾಮದ ಹಿರಿಯರು ಹಾಗೂ ಸಂತ್ರಸ್ತರು ತಿಳಿಸಿದ್ದಾರೆ.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ವಿರುಪಾಪುರ:ಎಲ್&ಟಿ ಅವೈಜ್ಞಾನಿಕ ಕಾಮಗಾರಿ, ಮನೆಗಳಿಗೆ ನೀರು*-
ವಿಜಯನಗರ ಜಿಲ್ಲೆ ಕೂಡ್ಲಿಗಿ ವಿರುಪಾಪುರ ಗ್ರಾಮದಲ್ಲಿ,ಮೇ 19ರಂದು ರಾತ್ರಿ ಸುರಿದ ಮಳೆಯಿಂದಾಗಿ.ನೀರು ಗ್ರಾಮದ ಹಲವು ಮನೆಯಂಗಳಕ್ಕೆ ನುಗ್ಗಿ ಜೀವನ ಅಸ್ಥವ್ಯಸ್ತವನ್ನಾಗಿಸಿದೆ,
ರಸ್ಥೆ ನಿಮಾರ್ಣದ ವೇಳೆ ಅನುಸರಿಸಿರುವ ಅವೈಜ್ಞಾನಿಕತೆಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.ನೂತನ ರಸ್ಥೆ ಬದಿಯಲ್ಲಿ ರಾಜಕಾಲುವೆ ನಿರ್ಮಿಸಬೇಕಿತ್ತು ನಿರ್ಮಿಸಿಲ್ಲ,ಇದರಿಂದಾಗಿ ಮಳೆ ನೀರು ರಸ್ಥೆಬದಿಯಲ್ಲಿರುವ ತೆಗ್ಗು ಪ್ರದೇಶದ 20 ಮನೆಗಳಿಗೆ ನುಗ್ಗುತ್ತಿದೆ. ಕಲುಷಿತ ನೀರು ಮನೆಗಳಿಗೆ ನುಗ್ಗಿ ನಿಂತು ಸಾಂಕ್ರಮಿಕ ರೋಗ ಹರಡುತ್ತಿದೆ,ಕರೋನಾದಂತಹ ಈ ದುಸ್ಥಿತಿಯಲ್ಲಿ ಮನೆಯಂಗಳದಲ್ಲಿ ನೀರು ನಿಂತು ರೂಗ ಋಜನಿ ಹರಡುವ ಭೀತಿ ಸೃಷ್ಟಿಯಾಗಿದೆ. ಇದರಿಂದಾಗಿ ಪ್ರತಿ ಮಳೆಗಾಲದಲ್ಲಿ 20ಕುಟುಂಬಗಳು ನೆಮ್ಮದಿ ಕಳೆದುಕೊಳ್ಳುತಿದ್ದು,ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.ರಸ್ಥೆ ನಿರ್ಮಣ ಮಾಡಿರುವ ಎಲ್ ಅಂಡ್ ಟಿ ಕಂಪನಿ ಅವೈಜ್ಞಾನಿಕ ರಸ್ಥೆ ಕಾಮಗಾರಿಯೇ ಈ ಅವಾಂತರಕ್ಕೆ ಕಾರಣವಾಗಿದೆ, ಅಂಡರ್ ಪಾಸಿಂಗ್ ನಲ್ಲಿ ಬೃಹತ್ ತೆಗ್ಗು ನಿರ್ಮಾಣವಾಗಿದೆ.ನೀರು ನಿಂತು ವಾಹನ ಸಂಚಾರಕ್ಕೆ ಮಾತ್ರವಲ್ಲ ಪಾದಾಚಾರಿಗಳು ಸಂಚರಿಸಲಾಗುತ್ತಿಲ್ಲ,ರಸ್ಥೆ ನಿರ್ಮಾಣವಾದಾಗಿನಿಂದ ಇದೇ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸೂಕ್ತ ಕ್ರಮಕ್ಕಾಗಿ ಹಲವು ಬಾರಿ ಕಂಪನಿಯವರ ಗಮನಕ್ಕೆ ತರಲಾಗಿದೆ,ಸಂಬಂಧಿಸಿದ ತಾಲೂಕು ಮಟ್ಟದ ಇಲಾಖಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಪ್ರಯೋಜನವಾಗಿಲ್ಲ.
ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜವಾಬ್ದಾರಿ ತೋರುತ್ತಿಲ್ಲ,ಈ ಭಾಗದ ಜಿಲ್ಲಾ ಪಂಚಾಯ್ತಿ ತಾಲೂಕು ಪಂಚಾಯ್ತಿ ಜನಪ್ರತಿನಿಧಿಗಳು.
ಪಕ್ಷಗಳ ಮುಖಂಡರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ,ಅವರೆಲ್ಲಾ ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ಈ ಸಮಸ್ಯೆ ಬಗೆಹರಿಸುವಲ್ಲಿ ಇಚ್ಚಾಶಕ್ತಿ ತೋರಬೇಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ತಾಲೂಕು ಪಂಚಾಯ್ತಿ ಅಧಿಕಾರಿ ಶೀಘ್ರವೇ ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕು,ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನ ಕೈಗೊಳ್ಳಬೇಕಿದೆ ನಿರ್ಲಕ್ಷ್ಯ ತೋರಿದ್ದಲ್ಲಿ,ಅಧಿಕಾರಿಗಳ ಜಿಲ್ಲಾಧಿಕಾರಿಗಳಲ್ಲಿ ಲಿಖಿತ ದೂರು ನೀಡಲಾಗುವುದೆಂದು ಗ್ರಾಮದ ಹಿರಿಯರು ಹಾಗೂ ಸಂತ್ರಸ್ತರು ತಿಳಿಸಿದ್ದಾರೆ.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030