ಕೂಡ್ಲಿಗಿ:”ರಂಜಾನ್” ಪ್ರಯುಕ್ತ ಆಹಾರ ಕಿಟ್ ವಿತರಣೆ -ಸೌಹಾರ್ಧತೆ ಮೆರೆದ ಪಪಂ ಸದಸ್ಯ ಪಿ.ಚಂದ್ರಶೇಖರ…!!!

Listen to this article

*ಕೂಡ್ಲಿಗಿ:”ರಂಜಾನ್” ಪ್ರಯುಕ್ತ ಆಹಾರ ಕಿಟ್ ವಿತರಣೆ -ಸೌಹಾರ್ಧತೆ ಮೆರೆದ ಪಪಂ ಸದಸ್ಯ ಪಿ.ಚಂದ್ರಶೇಖರ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 13ನೇ ವಾರ್ಡ್ ಸದಸ್ಯ ಹಾಗೂ ವಾಲ್ಮೀಕಿ ಸಮುದಾಯದ ಯುವ ಮುಖಂಡ ಪಿ.ಚಂದ್ರುರವರು,ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನ ವಿತರಿಸುವ ಮೂಲಕ ಸೌಹರ್ಧತೆ ಮೆರೆದಿದ್ದಾರೆ. ಪಟ್ಟಣ ಪಂಚಾಯ್ತಿ13ನೇ ವಾರ್ಡ್ ಸದಸ್ಯ ಹಾಗೂ ವಾಲ್ಮೀಕಿ ಸಮುದಾಯದ ಯುವ ಮುಖಂಡರಾದ ಪಿ.ಚಂದ್ರು ರವರು, ಹಲವು ವರ್ಷಗಳಿಂದ ಪ್ರತಿ ರಂಜಾನ್ ಹಬ್ಬದ ಸಂದರ್ಭದಲ್ಲಿ
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅಗತ್ಯ ನೆರವನ್ನು ನೀಡುತ್ತಿದ್ದಾರೆ.
ಈ ಮೂಲಕ ಅವರು ಯುವ ಪೀಳಿಗೆಗೆ ಹಾಗೂ ಇತರೆ ಜನ ಪ್ರತಿನಿಧಿಗಳಿಗೆ ಆದರ್ಶರಾಗಿದ್ದಾರೆ.
ಲಾಕ್ ಡೌನ್ ನಿಂದಾಗಿ ಹಲವು ಕುಟುಂಬಗಳು ತೀರಾ ಸಂಕಷ್ಟದಲ್ಲಿದ್ದು.
ಅವರ ಸ್ನೇಹಿತರಾದ ಮಂಜುನಾಥ.ಕೊತ್ಲೇಶ್.ರಾಜ.ಸತೀಶ್.ಅಂಜಿ.ಮುರಳಿ.ನೂರ್ ಅಹಮ್ಮದ್, ಅಮೀರ್,ರಾಘವೇಂದ್ರ ಸೇರಿದಂತೆ ಇತರೆ ಗೆಳೆಯರ ಸಹಕಾರದೊಂದಿಗೆ. ಸಂಕಷ್ಟದಲ್ಲಿರುವ ಕುಟುಂಬಗಳನ್ನು ಪತ್ತೆ ಹಚ್ಚಿ,ಅವರಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನ ಸದಸ್ಯ ಪಿ.ಚಂದ್ರಶೇಖರ ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ13ನೇ ವಾರ್ಡಿನ ನಾಗರೀಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend