ಕೂಡ್ಲಿಗಿ:ನೇಹಾ ಹಿರೇಮಠ ಪ್ರಕರಣ, ಆರೋಪಿಯನ್ನು ಎನ್ಕೌಂಟರ್ ಮಾಡಬೇಕು-ABVP ಒತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ:ನೇಹಾ ಹಿರೇಮಠ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು, ಕೂಡಲೇ ಎನ್ಕೌಂಟರ್ ಮಾಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕೂಡ್ಲಿಗಿ ಘಟಕ ಸರ್ಕಾರಕ್ಕೆ ಒತ್ತಾಯಿಹಿಸಿದೆ. ಪಟ್ಟಣದಲ್ಲಿಂದು(ಎ24) ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕೂಡ್ಲಿಗಿ ಘಟಕದ ಪದಾಧಿಕಾರಿಗಳು, ನೇಹಾ ಹಿರೇಮಠ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಅವರು ತಹಶಿಲ್ದಾರರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡುವ ಮೂಲಕ, ಸರ್ಕಾರಕ್ಕೆ ಪತ್ರ ರವಾನೆ ಮಾಡಿದ್ದಾರೆ. ಎಬಿವಿಪಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಮಾತನಾಡಿ, ಆರೋಪಿಗೆ ಸರ್ಕಾರ ಶಿಕ್ಷೆ ನೀಡುವಲ್ಲಿ ವಿಳಂಬ ನೀತಿ ತಾಳಬಾರದು. ಆರೋಪಿಯನ್ನು ಕೂಡಲೇ ಎನ್ಕೌಂಟರ್ ಮಾಡುವಂತೆ ಅಗತ್ಯ ಕ್ರಮವನ್ನು, ಸರ್ಕಾರ ಹಾಗೂ ಗೌರವಾನ್ವಿತ ಉನ್ನತ ನ್ಯಾಯಾಧೀಶರು ಜರುಗಿಸಬೇಕೆಂದು ಅವರು ಈ ಮೂಲಕ ಒತ್ತಾಯಿಸಿದ್ದಾರೆ…
ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030