ಕೂಡ್ಲಿಗಿ:ಶಾಸಕರ ಆಪ್ತರಿಂದ ಹಣ್ಣುಗಳ ಕಿಟ್ ವಿತರಣೆ
ವಿಜಯನಗರ ಜಿಲ್ಲೆ:ಕೂಡ್ಲಿಗಿ ಶಾಸಕರಾದ ಎನ್.ವೈ. ಗೋಪಾಲಕೃಷ್ಣರವರ ಸೂಚನೆ ಮೇರೆಗೆ ಅವರ ಆಪ್ತರು ಹಾಗೂ ಬಿಜೆಪಿ ಮುಖಂಡರು. ತಾಲೂಕಿನ ಕಂದಗಲ್ಲು ಮತ್ತು ತಾಯಕನಹಳ್ಳಿ ಮೊರಾರ್ಜಿ ವಸತಿ ಶಾಲೆ ಕೋವಿಡ್ 19 ಆರೈಕೆ ಕೇಂದ್ರದಲ್ಲಿ,ಸೋಂಕಿತರಿಗೆ ಹಾಗೂ ಕೂಡ್ಲಿಗಿ ಸಾರ್ವಜನಿಕ ಅರೋಗ್ಯ ಕೇಂದ್ರ ಕೋವಿಡ್ ಆಸ್ಪತ್ರೆಯಲ್ಲಿ, ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹಣ್ಣು ಫಲಹಾರ ಕಿಟ್ ವಿತರಣೆ ಮಾಡಲಾಯಿತು.
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಚನ್ನಪ್ಪ,ಶಾಸಕರ ಅಪ್ತ ಸಹಾಯಕ ಶ್ರೀಕಾಂತ್ ತಹಶಿಲ್ದಾರರಾದ ಟಿ. ಜಗದೀಶ್,ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ,ಹಣ್ಣುಗಳಿರುವ ಕಿಟ್ ಗಳನ್ನು ಸೋಂಕಿತ ರೋಗಿಗಳಿಗೆ ತಲುಪಿಸುವಂತೆ ಸೂಚಿಸಿ.ತಾ ವೈಧ್ಯಾಧಿಕಾರಿ ಷಣ್ಮುಖ ನಾಯ್ಕರಿಗೆ ಹಸ್ತಾಂತರಿಸಲಾಯಿತು ಆರೋಗ್ಯ ಇಲಾಖಾ ಸಿಬ್ಬಂದಿ ಇದ್ದರು.
ವರದಿ.ಡಿ ಎಂ ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030