ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು. ಕಾನಹೊಸಹಳ್ಳಿ
ವಿದ್ಯುತ್ ಪರಿವರ್ತಕದ ಸುತ್ತ ಬೆಳೆದಿರುವ ಮುಳ್ಳು ಬೇಲಿಯನ್ನು ತೆರವು ಗೊಳಿಸುವಂತೆಗ್ರಾಮಸ್ಥರ ಮನವಿ.
ಕಾನಹೊಸಹಳ್ಳಿ ಪಟ್ಟಣದ ದಲಿತ ಕಾಲೊನಿಯ ಕುಟುಂಬಗಳು ವಾಸಿಸುವ ಮನೆಗಳ ಪಕ್ಕದಲ್ಲಿ ಹಾಗೂ ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಪರಿವರ್ತಕ ಕಂಬ ಇದ್ದು (ಟ್ರಾನ್ಸ್ ಫಾರ್ಮ್ ) ಇದರ ಸುತ್ತಲೂ ಮುಳ್ಳಿನ ಬೇಲಿಕಂಬಕ್ಕೆ ಆವರಿಸಿಕೊಂಡು ಬೆಳೆದಿರುತ್ತದೆ.ನಂತರ ಹುಣಸೆ ಮರದ ಅಡಿಯಲ್ಲಿ ವಿದ್ಯುತ್ ತಂತಿಗಳು ಮರಕ್ಕೆ ತಾಕಿಕೊಂಡು ವಿದ್ಯುತ್ ಪರಿವರ್ತಕ ಕ್ಕೆಹಾದುಹೋಗಿವೆ, ಸ್ವಲ್ಪ ಗಾಳಿ ಬಂದರೂ ಸಾಕು ವಿದ್ಯುತ ಉತ್ಪತ್ತಿಯಾಗಿ ಬೆಂಕಿಯ ಕಿಡಿಗಳು ಹಾರುತ್ತವೆ, ಇಲ್ಲಿ ಕೆಲವು ಕುಟುಂಬಗಳು ವಾಸಿಸುವ ಮನೆಗಳಿವೆ. ವಿದ್ಯುತ್ ತಂತಿಯನ್ನು ಹುಣಸೆಮರಕ್ಕೆ ತಾಕದಂತೆ ಪರ್ಯಾಯ ವ್ಯವಸ್ಥೆ ಮಾಡಿ,ವಿದ್ಯುತ್ ಪರಿವರ್ತಕದ ಸುತ್ತ ಬೆಳೆದಿರುವ ಮುಳ್ಳು ಬೇಲಿಯನ್ನು ತೆರವು ಮಾಡಿ, ಸಾರ್ವಜನಿಕರಿಗೂ ಹಾಗೂ ವಾಸಿಸುವ ಕುಟುಂಬಸ್ಥರಿಗೆ
ಸಂಬಂಧಪಟ್ಟ ಕೆಇಬಿ ಇಲಾಖೆಯವರು ಅನುಕೂಲ ಮಾಡಿಕೊಡಬೇಕಾಗಿಗ್ರಾಮಸ್ಥರು ಮನವಿ ಮಾಡಿದ್ದಾರೆ…
ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030