ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ವಡ್ಡರಟ್ಟಿ ಯಲ್ಲಿ, ನಟ ದಿವಂಗತ ಪುನೀತ್ ರಾಜಕುಮಾರ್ ಅವರ ಕಟ್ಟಾ ಅಭಿಮಾನಿಗಳಾದ ಪೂಜಾರಿ ರಾಮಜ್ಜರ ವಂಶದ ಸಮಾಜ ಸೇವಕ ಆರ್.ಟಿ.ನಾಗರಾಜ್ ಹಾಗೂ ಶ್ರೀಮತಿಮಲ್ಲಮ್ಮ ನವರು. ತಮ್ಮ ಮನೆಯಂಗಳದಲ್ಲಿ ಪುನೀತ್ ರಾಜಕುಮಾರ್ ರವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಅಭಿಮಾನ ಮೆರೆದಿದ್ದಾರೆ. ಪುನೀತ್ ರಾಜಕುಮಾರವರ ನೂತನ ಪುತ್ಥಳಿಯನ್ನು, 26ರಂದು ಭಾನುವಾರ ಮಾಜಿ ಶಾಸಕರಾದ ಕೆ.ವಿ.ರವೀಂದ್ರನಾಥ ಬಾಬು, ಹಾಗೂ ಕೆಪಿಸಿಸಿ ಸದಸ್ಯ ಲೋಕೇಶ್ ವಿ ನಾಯಕ ನೇತೃತ್ವದಲ್ಲಿ ಅನಾವರಣ ಗೊಳಿಸಲಾಯಿತು. ಸಮಾಜ ಸೇವಕ ಆರ್.ಟಿ.ನಾಗರಾಜ ರವರು ಮಾತನಾಡಿ, ಪುನೀತ್ ರಾಜಕುಮಾರ ಅಧ್ಬುತ ನಟರಾಗಿದ್ದಾರೆ ಜೊತೆಗೆ ವೈಶಿಷ್ಟಪೂರ್ಣ ಸಮಾಜ ಸೇವಕ ಕೂಡ, ಅವರು ಇಡೀ ಯುವ ಪೀಳಿಗೆಗೆ ಮಾದರಿ ಯುವರಾಜ್ ರಾಗಿದ್ದಾರೆ. ಈ ಮೂಲಕ ಅವರು ಸದಾ ಜನಮಾನಸದಲ್ಲಿರುತ್ತಾರೆ, ಅವರು ಇಹಲೋಕ ಅಗಲಿರಬಹುದು. ಆದ್ರೆ ಆವರು ತಮ್ಮ ಸೇವಾ ಕುರುಹುಗಳ ಮೂಲಕ ಅಮರರಾಗಿದ್ದಾರೆ ಎಂದರು. ಪುನೀತ್ ರು ಬಾಲ ನಟನಿದ್ದಾಗಲಿಂದಲೂ ತಾವು ಅವರ ಅಭಿಮಾನಿಯಾಗಿದ್ದು, ಆಗಿನಿಂದ ಈ ವರೆಗೆ ಪುನೀತ್ ರಾಜ್ ಅಭಿನಯಿಸಿರುವ ಪ್ರತಿ ಚನಚಿತ್ರಗಳನ್ನು, ಕುಟುಂಬ ಸದಸ್ಯರೊಡಗೂಡಿ ವೀಕ್ಷಿಸಿದ್ದಾರಂತೆ. ಪುನೀತ್ ರಂತೆ ತಾವೂ ಕೂಡ ತಮ್ಮ ಶಕ್ತಿ ಅನುಸಾರ ಸಮಾಜ ಸೇವೆ ಮಾಡುವ ಇಂಗಿತವನ್ನು ನಾಗರಾಜ್ ಹೊಂದಿದ್ದು, ಈ ನಿಟ್ಟಿನಲ್ಲಿ ಯುವ ಪೀಳಿಗೆಗೆ ಮಾದರಿಯಾಗುವ ಬಯಕೆಯನ್ನು ಅವರು ವ್ಯೆಕ್ತಪಡಿಸಿದ್ದಾರೆ. ವೈದ್ಯ ಎಸ್.ಪಿ. ಪ್ರದೀಪ್ ಕುಮಾರ್ ಹಾಗೂ ಸೋಮಶೇಖರ್, ಆರ್.ವಿ. ತಿಪ್ಪೇಸ್ವಾಮಿ. ಹೊಸಳ್ಳಿ ಗ್ರಾಮದ ಬಸವರಾಜ ಕುಂಬಾರ್ ಮತ್ತು ಶಾರದಮ್ಮ. ಮಂಜುನಾಥ ಭಾಷಾ ಸಾಬ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಗ್ರಾಮದ ಹಿರಿಯರು ಹಾಗೂ ನೂರಾರು ಯುವಕರು,ನೂರಾರು ಪುನೀತ್ ರಾಜಕುಮಾರ್ ಅಭಿಮಾನಿಗಳು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…
ವರದಿ.ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030