ಕ.ಸಾ.ಪ ಇಟ್ಟಿಗಿ ಹೋಬಳಿ ಘಟಕ ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ನಾಡು ನೆಲ ಜಲ ರಕ್ಷಣೆ ಸದಾಸಿದ್ದವಿರುವ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದು .ಇಂತಹ ಪರಿಷತ್ತು ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ಕಾರ್ಯವೈಖರಿಮೆರಿದಿದೆ.ನೂತನ ಪದಾಧಿಕಾರಿಗಳ ಅಧಿಕಾರ ದೀಕ್ಷಾ ಸಮಾರಂಭವು ಇಟ್ಟಿಗಿಯ ಆಂಜನೇಯ ಸಭಾಂಗಣದಲ್ಲಿ ದಿನಾಂಕ15/10/20222ರ ಶನಿವಾರ ಸಂಜೆ ನೆಡೆಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಜಗದ್ಗುರು ಸೋಮಶಂಕರ ಮಹಾಸ್ವಾಮಿಗಳು ವಹಿಸಿದ್ದರು.ಅಧ್ಯಕ್ಷತೆಯನ್ನು ಶ್ರೀ ವೀರೇಂದ್ರ ಪಾಟೇಲ್ ರು ಹೂವಿನ ಹಡಗಲಿ ತಾಲೂಕು ಘಟಕ.ಕ.ಸಾ.ಪ ಅಧ್ಯಕ್ಷರು ವಹಿಸಿದ್ದರು.ಉದ್ಘಾಟನೆಯನ್ನು ಜಿಲ್ಲಾಧ್ಯಕರಾದ ಶ್ರೀ ನಿಷ್ಠಿರುದ್ರಪ್ಪರು ವಹಿಸಿದ್ದರು.ಅಥಿತಿಗಳಾಗಿ ಗ್ರಾಂ.ಪಂ.ಅಧ್ಯಕ್ಷರು ಪುಷ್ಪಾ ಮಹಾಬಲೇಶ್ . ಚಂದ್ರು ಗೌಡರು.ತಾಲೂಕು ನಿಕಟ ಪೂರ್ವ ಅಧ್ಯಕ್ಷರು ಹೆಚ್.ಜಿ ಪಾಟೇಲರು .ಹೋಬಳಿ ಕ.ಸಾ.ಪ.ನಿಕಟ ಪೂರ್ವ ಅಧ್ಯಕ್ಷರು ಹಾಚಿಯವರು(ಹಾಲಪ್ಪ ಚೀಗಟೇರಿ ) ಸುದಶ೯ನಶೆಟ್ಟಿ.ಕೊಟ್ರೇಶ್ ಗೌಡ.ಗುರುಬಸವರಾಜ. ಶೀಲಾಕೊಟ್ರೇಶ್ ಕ.ಕ.ಕ ಒಕ್ಕೂಟದ ತ್ರಿವಳಿಅಧ್ಯಕ್ಷರು ಭಾಗವಹಿಸಿ ಪದಗ್ರಹಣ ಮಾಡಲಾಯಿತು. ಹೋಬಳಿ ಘಟಕದ ಅಧ್ಯಕ್ಷರಾಗಿ ಕು ಜಿ.ಬಿ.ವಿನಯರಾಜ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗಳಾಗಿ ಕೆ.ಜಗದೀಶ್, ಸಂಘಟನಾ ಕಾರ್ಯದರ್ಶಿ ಯಾಗಿ ನಿಂಗರಾಜು, ಮಹಿಳಾ ಪ್ರತಿನಿಧಿ ಯಾಗಿ ಹೆಚ್.ಬಿ.ಹೇಮಾವತಿ, ಪರಿಶಿಷ್ಟ ಪಂಗಡದ
ಪದಾಧಿಕಾರಿಯಾಗಿ ತಿಪ್ಪಣ್ಣ, ಡಿ.ಪರಿಶಿಷ್ಠ ಜಾತಿಯ ಪದಾಧಿಕಾರಿಯಾಗಿ ಕನಕೇಶ್ ,ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ನಿಸಾರ್ ಅಹಮದ್ ಸಾಲಿನ್, ಹಿಂದೂವಗ೯ದ ಪ್ರತಿನಿಧಿಯಾಗಿ ನಾಗರಾಜ್ ಸುಣಗಾರ್, ಶಿಕ್ಷಣ ಇಲಾಖೆ ಪ್ರತಿನಿಧಿಯಾಗಿ ಕೆ.ಗಂಗಾಧರಪ್ಪ, ಮಹಾವಿದ್ಯಾಲಯ ಪ್ರತಿನಿಧಿ ಯಾಗಿ ಬಿ.ದೇವರಾಜ ಅಧಿಕಾರ ಸ್ವೀಕರಿಸಿದರು.ನಂತರ ಕವಿಗೋಷ್ಠಿ ನಡೆಯಿತು ಹಾಲಪ್ಪ ಚಿಗಟೇರಿ, ಹಾಲೇಶ್ ಹಕ್ಕಂಡಿ, ಕೆ.ಕಾತೀ೯ಕ, ನಿಸಾರ್ ಅಹಮದ್ ಸಾಲಿಯಾನ್ ಶಿವಲೀಲಾ ಅರವಿಂದ ನಯನ ಮಲ್ಲಿನಾಥ ಕವನ ವಾಚನ ಮಾಡಿದರು. ಕ.ಸಾ.ಪ.ಕಾರ್ಯಕಾರಿ ಸಮಿತಿಯವರು ಕೊಟ್ರೇಶ್ ಉತ್ತಂಗಿ ಸ್ತ್ರೀನೃತ್ಯ ಪ್ರದರ್ಶನ ನೀಡಿದರು.
ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030