ಕಿಚ್ಚ ಸುದೀಪ್ ಸೈನ್ಯ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ…
ಮಹರ್ಷಿ ವಾಲ್ಮೀಕಿ ಕೇವಲ ಒಂದು ಜನಾಂಗಕ್ಕೆ ಸೀಮಿತವಲ್ಲ ಅವರು ವಿಶ್ವ ಮಾನವರು ಅವರ ಆದರ್ಶಗಳು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಹೇಳಿದರು.
ಹರಪನಹಳ್ಳಿ :-ತಾಲ್ಲೂಕಿನ ಆಲಮರಸಿಕೇರಿ ಗ್ರಾಮದಲ್ಲಿ ಕಿಚ್ಚ ಸುದೀಪ್ ಸೈನ್ಯ ಸಮಿತಿ ವತಿಯಿಂದ ಜರುಗಿದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಾಲ್ಮೀಕಿನಾಯಕ ಸಮಾಜವನ್ನು ಓಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೋಳ್ಳಲಾಗುತ್ತಿದ್ದು ಚುನಾವಣೆಯಲ್ಲಿ ರಾಜಕೀಯ ಮಾಡಬೇಕು ಚುನಾವಣೆ ಮುಗಿದ ನಂತರ ನಾವೆಲ್ಲ ವಾಲ್ಮೀಕಿ ನಾಯಕರಾಗಬೇಕು ವಿನಹ ರಾಜಕಾರಣವೇ ಜೀವನವಾಗಬಾರದು.
ವಾಲ್ಮೀಕಿನಾಯಕ ಸಮಾಜದವರು ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ಜಾಗೃತಿಯಾಗಬೇಕಿದೆ, ಸರ್ಕಾರದಿಂದ ಪರಿಶಿಷ್ಟಜಾತಿ ಜನಾಂಗದವರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಲಾಗಿದೆ ಅಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಟಿ. ಜಗದೀಶ ಮಾತನಾಡಿ ವಾಲ್ಮೀಕಿ ಜಯಂತಿ ಬರಿ ವಾಲ್ಮೀಕಿ ಜನಾಂಗಕ್ಕೆ ಸಿಮಿತವಲ್ಲ ವಾಲ್ಮೀಕಿ ಬರೆದ ರಾಮಯಾಣ ಶತಶತಮಾನಗಳು ಕಳೆದರೂ ಆದರ್ಶಪ್ರಾಯವಾಗಿದ್ದು ರಾಮನನ್ನು ಸ್ಮರಣೆ ಮಾಡುವ ಕೃತಿರಚಿಸಿದ ವಾಲ್ಮೀಕಿಯವರನ್ನು ಸ್ಮರಣೆ ಮಾಡದೆ ಇರವುದು ದುರುಂತವೆ ಸರಿ ವಾಲ್ಮೀಕಿ ಇಡಿ ಜಗತ್ತಿಗೆ ಉತ್ತಮ ಗ್ರಂಥಬರೆದ ಮಹನ್ ದಾರ್ಶಿನಿಕ ಎಂದರು.
ಕರುಬ ಸಮಾಜದ ಸಂಘಟನಾ ಕಾರ್ಯದರ್ಶೀ ಪರುಶುರಾಮ ಮಾತನಾಡಿ ಇತರೆ ಸಮಾಜದ ಜೋತೆಗೆ ಉತ್ತಮ ಭಾಂಧವ್ಯ ಇಟ್ಟುಕೊಳ್ಳಬೇಕು ಎಲ್ಲರೂ ಶಿಕ್ಷಣ ವಂತರಾಗಬೇಕು ವಿದ್ಯೆಗಿಂತ ಸಂಪತ್ತು ಬೇರೆ ಇಲ್ಲ ಪರಿಶಿಷ್ಟ ಜಾತಿ ಹಿಂದೂಳಿದ ವರ್ಗದವರು ಕಷ್ಟ ಜೀವಿಗಳಾಗಿದ್ದು ಕಷ್ಟ ಎನ್ನುವುದು ಜೀವನದ ಪಾಠ ಕಲಿಸುತ್ತದೆ,ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಡಿ.ಗೋಣೆಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಬಸವರಾಜ, ಏಕಲವ್ಯ ಸಂಘರ್ಷ ಸಮಿತಿ ಉಪಾಧ್ಯಕ್ಷ ಟಿ.ಮಂಜುನಾಥ, ಮುಖಂಡರಾದ ಪೂಜಾರ್ ದೆವೇಂದ್ರಪ್ಪ, ಟಿ.ಗೋಂಎಪ್ಪ, ಟಿ. ಅಂಜಿನಪ್ಪ, ಟಿ. ಗಂಗಪ್ಪ, ಬಿ. ಗೋಣೆಪ್ಪ, ಟಿ. ಕಿರಣ್, ಟಿ. ನಾಗರಾಜ, ವೆಂಕಟೇಶಮ ಟಿ. ಸುನೀಲ್, ಟಿ. ಮೌನೇಶ್, ಎ. ಅಂಜಿನಪ್ಪ, ಕೆ. ಮಂಜಪ್ಪ, ಟಿ.ಕೆಂಚಪ್ಪ, ಬೆಟ್ಟಪ್ಪ, ಪ್ರಕಾಶ.ಕೆ, ಸೇರಿದಂತೆ ಇತರರು ಇದ್ದರು…
ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030