ಸಲಿಗೆ ಸನ್ನಿವೇಶಕ್ಕೆ ಬಿತ್ತು ಅಮಾಯಕ ಹೆಣ
ಬಾಗಲಕೋಟ ಜಿಲ್ಲೆಯ ಬನಹಟ್ಟಿಯ ನಗರದ ಬಾವಿಯಲ್ಲಿ ಅನಾಮಧೇಯ ಹೆಣ ದಿನಾಂಕ 16/01/2022 ರಂದು ಪತ್ತೆಯಾಗಿತ್ತು ಇದರ ಪ್ರಕರಣ ದಾಖಲಿಸಿಕೊಂಡ ಬನಹಟ್ಟಿ ಪೋಲಿಸರು ಕೆಲವೇ ಗಂಟೆಗಳಲ್ಲಿ ಸಾವಿಗೆ ಕಾರಣವಾದರವರ ಪತ್ತೆ ಹಚ್ಚಿದ್ದಾರೆ ಕಾರಣ ಆತ್ಮಹತ್ಯೆ ಮಾಡಿಕೊಂಡ ಸುನೀಲ ಶಂಕರ್ ಘೋಡಕೆ ಎಂಬ ವ್ಯಕ್ತಿ ನೇಕಾರ ನಗರಿಯ ಸ್ಪಿನಿಂಗ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಅದೆ ಮಿಲ್ ನಲ್ಲಿ ನಿರ್ಮಲಾ ಜಗದೀಶ ಅಡಬಟ್ಟಿ, ಅಬರೀಶ ಬಸವಣ್ಣಿ ಕಳ್ಳ್ಯಾಗೋಳ ಎಂಬುವರು ಅಕ್ರಮವಾಗಿ ಮಾತು ಮತ್ತು ಸಲುಗೆಯಿಂದ ಒಡನಾಟ ಇಟ್ಟುಕೊಂಡಿರುತ್ತಾರೆ ಇದನನ್ನು ಗಮನಿಸಿದ ಸುನೀಲ ಘೋಡಕೆ ಇಬ್ಬರಿಗೂ ಮಾನವೀಯತೆಯಿಂದ ತಿಳಿಮಾತು ಹೇಳಿದ್ದಾನೆ.
ಇವನ ಮಾತಿಗೆ ಬೆಲೆ ಕೊಡದೇ ತಮ್ಮ ಸಲುಗೆಯ ಪರಾಕಾಷ್ಠೆಯಲ್ಲಿ ತೆಲಾಡುವುದಲ್ಲದೆ ಸುನೀಲನಿಗೆ ಕಿರುಕುಳ ಮತ್ತು ಮಾನಸಿಕವಾಗಿ ಹಿಂಸೆ ಕೊಡಲಾರಂಬಿಸಿದ್ದಾರೆ ಇದರಿಂದ ಮನನೊಂದು ಸುನೀಲ ಘೋರಕೆ ಬನಹಟ್ಟಿಯ ಬಸ್ ನಿಲ್ದಾಣ ಎದುರುಗಡೆ ಇರುವ ಪುರಾತನ ಖಾಸಗಿ ಭಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗಿಡಾಗಿದ್ದಾನೆ.
ಈ ಪ್ರಕರಣ ದಾಖಲಿಸಿಕೊಂಡ ಬನಹಟ್ಟಿ ಪೋಲಿಸರು ಕೆಲವೆ ಗಂಟೆಗಳಲ್ಲಿ ಈ ಆತ್ಮಹತ್ಯೆಗೆ ಕಾರಣವಾದವರ ಗುರ್ತು ಪತ್ತೆ ಮಾಡಿ ಸಾರ್ವಜನಿಕರಲ್ಲಿ ಶ್ಲಾಘನೀಯಕ್ಕೆ ಪಾತ್ರರಾಗಿದ್ದಾರೆ ಇನ್ನೂ ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ಇದರ ಹಿಂದೆ ಯಾರಾರು ಇದ್ದಾರೆ ಎನ್ನುವುದನ್ನು ಪತ್ತೆ ಮಾಡಿ ಶಿಕ್ಷೆಗೊಳಪಡಿಸಿ ಜೈಲಿಗಟ್ಟುವ ಕೆಲಸ ಮಾಡಬೇಕು.
ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030