ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ರಾಜ್ಯದ ಸಿಎಂ ಯಾರು ಆಗ್ತಾರೆ ಎನ್ನುವ ಕುತೂಹಲ ಮೂಡಿದೆ. ಆದರೆ ಇದೀಗ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ (Siddharamayya) ಮತ್ತು ಡಿ.ಕೆ. ಶಿವಕುಮಾರ್ ( DK Shivakumar) ನಡುವೆ ತೀವ್ರ ಪೈಪೋಟಿ ಮುಂದುವರೆದಿದ್ದು, Karnataka Cabinet List 2023 ಸದ್ಯಕ್ಕೆ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಚರ್ಚೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಘೋಷಣೆ ಮಾಡಲಿದ್ದಾರೆಬಹುಮತ ಪಡೆದ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯ ಸ್ಥಾನಕ್ಕೆ ಸಾಕಷ್ಟು ನಾಯಕರ ಹೆಸರುಗಳು ಕೇಳಿ ಬರುತ್ತಿದೆ. ಸದ್ಯಕ್ಕೆ ಜನರ ಚಿತ್ತ ರಾಜ್ಯ ಸರ್ಕಾರದ ರಚನೆಯ ಮೇಲೆ ನೆಟ್ಟಿದೆ. ಇಟ್ಟ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೆವಾಲಾ (Ranadeep Surjevala) , ಕೆ.ಸಿ. ವೇಣುಗೋಪಾಲ್ (KC Venugopal) ಹಾಗೂ ಚುನಾವಣಾ ಕಾರ್ಯತಂತ್ರ ಉಸ್ತುವಾರಿ ಸುನಿಲ್ ಕನುಗೋಲು (Sunil Kanugolu) ಜೊತೆಗೂಡಿ ಸಚಿವರ ಶಾರ್ಟ್ ಲಿಸ್ಟ್ ಮಾಡಿದ್ದಾರೆ.ಸಚಿವರ ಶಾರ್ಟ್ ಲಿಸ್ಟ್ ನಲ್ಲಿ ಯಾರದೆಲ್ಲಾ ಹೆಸರಿದೆ?
*ಬೆಳಗಾವಿ-ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್. ಸತೀಶ್ ಜಾರಕಿಹೊಳಿ
*ಬಾಗಲಕೋಟೆ – ಆರ್.ಬಿ.ತಿಮ್ಮಾಪುರ
* ಹಾವೇರಿ – ರುದ್ರಪ್ಪ ಲಮಾಣಿ
* ಬಳ್ಳಾರಿ – ತುಕಾರಾಮ್, ನಾಗೇಂದ್ರ
* ಚಿತ್ರದುರ್ಗ – ರಘುಮೂರ್ತಿ. ಟಿ
* ದಾವಣಗೆರೆ – ಶಾಮನೂರು ಶಿವಶಂಕರಪ್ಪ/ ಎಸ್ಎಸ್ ಮಲ್ಲಿಕಾರ್ಜುನ
* ಶಿವಮೊಗ್ಗ – ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್
* ಚಿಕ್ಕಮಗಳೂರು – ಟಿ.ಡಿ. ರಾಜೇಗೌಡ
* ತುಮಕೂರು – ಡಾ. ಜಿ. ಪರಮೇಶ್ವರ್, ಎಸ್ ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ
* ಚಿಕ್ಕಬಳ್ಳಾಪುರ – ಸುಬ್ಬಾರೆಡ್ಡಿ
* ಕೋಲಾರ- ರೂಪ ಶಶೀಧರ್,ನಾರಾಯಣ ಸ್ವಾಮಿ
* ಬಿಜಾಪುರ – ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್
* ಕಲಬುರಗಿ – ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಶರಣ ಪ್ರಕಾಶ್ ಪಾಟೀಲ್
* ರಾಯಚೂರು – ಬಸನಗೌಡ ತುರುವಿಹಾಳ/ಹಂಪನಗೌಡ ಬಾದರ್ಲಿ
* ಯಾದಗಿರಿ – ಶರಣಪ್ಪ ದರ್ಶನಾಪುರ್
* ಬೀದರ್ – ರಹೀಮ್ ಖಾನ್, ಈಶ್ವರ್ ಖಂಡ್ರೆ
* ಕೊಪ್ಪಳ – ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ
* ಗದಗ – ಹೆಚ್.ಕೆ. ಪಾಟೀಲ್
* ಧಾರವಾಡ – ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ,ಸಂತೋಷ್ ಲಾಡ್
* ಉತ್ತರ ಕನ್ನಡ – ಭೀಮಣ್ಣ ನಾಯ್ಕ್
* ಬೆಂಗಳೂರು- ಕೆಜೆ ಜಾರ್ಜ್/ ರಾಮಲಿಂಗಾ ರೆಡ್ಡಿ, ಹ್ಯಾರಿಸ್, ಎಂ. ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್
* ಬೆಂಗಳೂರು ಗ್ರಾಮಾಂತರ. ಕೆಚ್ ಮುನಿಯಪ್ಪ
* ಮಂಡ್ಯ- ಎನ್ ಚೆಲುವರಾಯ ಸ್ವಾಮಿ
* ಮಂಗಳೂರು- ಯುಟಿ ಖಾದರ್
* ಮೈಸೂರು-ಎಚ್ಸಿ ಮಾಹದೇವಪ್ಪ,ತನ್ವೀರ್ ಸೇಠ್
* ಚಾಮರಾಜನಗರ- ಪುಟ್ಟರಂಗಶೆಟ್ಟಿ
* ಕೊಡಗು- ಎ.ಎಸ್ ಪೊನ್ನಣ್ಣ ಇತರ ಶಾಸಕರು ಹಾಜರಿದ್ದರು…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030