ರಿ ನ್ಯೂ ಪವರ್ ಸೋಲಾರ್ ಉರ್ಜಾ ಪ್ರವೇಟ್ ಲಿಮಿಟೆಡ್ ವತಿಯಿಂದ ಕಾರುಣ್ಯ ಆಶ್ರಮಕ್ಕೆ ಜಾಕೆಟ್ ಗಳ ವಿತರಣೆ –
ಸಿಂಧನೂರು : ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀ ಮಠಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯ ಪಡೆದಿರುವ ಎಲ್ಲಾ ಅನಾಥ ವೃದ್ಧರು ಹಾಗೂ ಅನಾಥ ವಯಸ್ಕರ ಬುದ್ಧಿಮಾಂದ್ಯರಿಗೆ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮದ ಸೀಮಾದಲ್ಲಿರುವ ಪ್ರತಿಷ್ಠಿತ ರಿ ನ್ಯೂ ಪವರ್ ಸೋಲಾರ್ ಉರ್ಜಾ ಲಿಮಿಟೆಡ್ ಕಂಪನಿಯ ವತಿಯಿಂದ ಉತ್ತಮವಾದ ಜಾಕೆಟ್ ಗಳನ್ನು ವಿತರಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ಕಂಪನಿಯ ವ್ಯವಸ್ಥಾಪಕರಾದ ನಾಗೇಶ ನಮ್ಮ ಕಂಪನಿ ವತಿಯಿಂದ ಆಶ್ರಮದಲ್ಲಿರುವ ಹಿರಿಯ ನಾಗರಿಕರ ಚಳಿಗಾಲದ ವ್ಯವಸ್ಥೆಯನ್ನು ನೋಡಿ ಜಾಕೆಟ್ ಗಳನ್ನು ನೀಡುವ ಪ್ರಾರಂಭದ ಕಾರ್ಯ ಕಾರುಣ್ಯಾಶ್ರಮದಲ್ಲಿ ಪ್ರಾರಂಭಿಸಿದ್ದೇವೆ. ಇಂತಹ ಹಲವಾರು ಯೋಜನೆಗಳನ್ನು ನಮ್ಮ ಕಂಪನಿಯು ಹಮ್ಮಿಕೊಂಡು ಜಿಲ್ಲೆಯಾದ್ಯಂತ ಅಲ್ಲದೇ ರಾಜ್ಯದಾದ್ಯಂತ ಕೂಡ ಸಮಾಜ ಪರ ಅನಾಥಪರ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಆದರೆ ಇಂತಹ ಅದ್ಭುತ ಸೇವೆ ಮಾಡುತ್ತಿರುವ ಕಾರುಣ್ಯ ಸಂಸ್ಥೆಗೆ ನಮ್ಮ ಕಂಪನಿಯ ವತಿಯಿಂದ ನಿರಂತರವಾಗಿ ಸಹಾಯ ದೊರೆಯುತ್ತದೆ. ಇಂತಹ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಕಾರುಣ್ಯ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳು ಎಂದು ಮಾತನಾಡಿದರು. ಈ ಸಮಯದಲ್ಲಿ ಈ ಕಂಪೆನಿಯ ಸಿಬ್ಬಂದಿಗಳಾದ ಖಾಜಾಹುಸೇನ ರಾಗಲಪರ್ವಿ ತಿಮ್ಮಣ್ಣ ಮೆದಿಕಿನಾಳ ಹಾಗೂ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ. ಸುಜಾತ ಚನ್ನಬಸವಸ್ವಾಮಿ. ಗೀತಾ ಕುಲಕರ್ಣಿ. ಪಂಪಯ್ಯ ಸ್ವಾಮಿ ಜವಳಗೇರಾ. ಇನ್ನೂ ಅನೇಕರು ಉಪಸ್ಥಿತರಿದ್ದರು. ನಂತರ ಆಶ್ರಮದ ವತಿಯಿಂದ ಕಂಪನಿಯ ವ್ಯವಸ್ಥಾಪಕರಾದ ನಾಗೇಶ ಅವರಿಗೆ ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು….
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030