ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
*ಮಲ್ಲರಹಳ್ಳಿ:ಹೊಟ್ಟೆ ನೋವು ತಾಳದೆ ಮಹಿಳೆ ಆತ್ಮಹತ್ಯೆ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಮಲ್ಲರಹಳ್ಳಿ ಗ್ರಾಮದಲ್ಲಿ,ಹೊಟ್ಟೆ ನೋವು ತಾಳದೆ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಮೃತ ಮಹಿಳೆ ಪವಿತ್ರ(23)ಬಹು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳೆಂದು,ಕೆಲ ದಿನಗಳ ಹಿಂದೆ ಮನ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಎತ್ನಿಸಿದ್ದಾಳೆ.ತೀವ್ರ ಅಸ್ವಸ್ಥ್ಯಗೊಂಡಿದ್ದ ಪವಿತ್ರಳನ್ನು,ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವಳು ಮೃತಪಟ್ಟಿರುತ್ತಾಳೆ. ಪ್ರಕರಣ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030