ಕೋವಿಡ್ ಮತ್ತು ನೆರೆಯ ನಡುವೆ ಜನತೆ ತುಂಬಾ ನೋವಿನಲ್ಲಿದೆ ಅದ್ದರಿಂದ ನೂತನ ಮುಖ್ಯಮಂತ್ರಿಗಳು ಸ್ಪಂದಿಸಬೇಕು ಪುತ್ರೇಶ್ ಕಾಯಣ್ಣನವರ್
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಯ್ಕೆಯಾದ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಕೋವಿಡ್ ಹಿನ್ನೆಲೆಯಲ್ಲಿ ಜನರು ಸಾಕಷ್ಟು ಸಂಕಟದಲ್ಲಿ ಇದಾರೆ ಎಷ್ಟೋ ಜನ ತಂದೆ ,ತಾಯಿ ಬಂಧುಗಳನ್ನ ಕಳೆದುಕೊಂಡು ಲಕ್ಷಾಂತರ ಜನ ಅನಾಥರಾಗಿದ್ದಾರ. ಇವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಹಾರಕೊಡುವಂತಹದ್ದು ಆಗಬೇಕು, ಕೋವಿಡ್ ನಿಂದ ಮರಣ ಹೊಂದಿದ ಕುಟುಂಬದ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನ ಒದಗಿಸಿಕೊಡಬೇಕು,
ಕೋವಿಡ್ ಮೂರನೇ ಅಲೆ ಯಾವಗ ಬೇಕಾದರೂ ಬರಬಹುದು ಅದಕ್ಕೆ ತಕ್ಕ ಸಿದ್ದತೆ ಮಾಡಿಕೊಳ್ಳಬೇಕು ಜೊತೆಗೆ ನೆರೆಯಿಂದ ಸಂಕಟಕ್ಕೆ ಒಳಗಾದವರಿಗೆ ಸಮೀಕ್ಷೆ ನಡೆಸಿ ಪರಿಹಾರ ಕೊಡುವಂತ ವ್ಯವಸ್ಥೆ ಆಗಬೇಕು, ನೂತನ ಮುಖ್ಯಮಂತ್ರಿಗೆಳಿಗೆ ಇದು ಗಮನದಲ್ಲಿ ಇರಲಿ ಎಂದು ಎಚ್ಚರಿಕೆ ಪತ್ರಿಕೆಯ ಮೂಲಕ ಶುಭಕೋರಿದರು.
ಹಿಂದೆ ಜೆ ಡಿ ಎಸ್ ಮತ್ತು ಬಿ ಜೆ ಪಿ ಸಂಮಿಶ್ರ ಸರ್ಕಾರ ಜಾರಿಯಲ್ಲಿದ್ದಾಗ ಕುಮಾರಸ್ವಾಮಿ ಅವರು ನಿರ್ಮಿಸಿದ ನೆರೆ ಪೀಡಿತರ ಮನೆಗಳನ್ನ ಬಿ ಜೆ ಪಿ ಉದ್ಘಾಟನೆ ಮಾಡಿತ್ತು.
ಉಪ ಮುಖ್ಯಮಂತ್ರಿ ಅಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ‘ಹಣ ಮತ್ತು ಜಾತಿ ಇಲ್ಲದೆ ಏನೂ ಮಾಡಲಾಗದ ಪರಿಸ್ಥಿತಿ ಇದೆ, ಇದು ಈ ದೇಶದ, ರಾಜ್ಯದ ದುರಂತ. ಒಳ್ಳೆತನ ,ಗುಣ,ವಿದ್ಯೆ, ಸೇವೆಯನ್ನ ನೋಡಿ ಸ್ಥಾನ ಮಾನಗಳನ್ನ ಕೊಡಬೇಕು’ ಎಂದು ಹೂವಿನ ಹಡಗಲಿಯ ಜೆ ಡಿ ಎಸ್ ಮುಖಂಡರಾದ ಶ್ರೀ ಪುತ್ರೇಶ್ ಕಾಯಣ್ಣನವರು ಪ್ರತಿಕ್ರಿಯೆ ನೀಡಿದರು .
ವರದಿ: ಅಜಯ. ಚ
ಹುಗಲೂರು
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030