ಹರಪನಹಳ್ಳಿ ಸಾರ್ವಜನಿಕರಿಗೆ ಇದ್ದರೂ ಇಲ್ಲದಂತಾದ ಹಾಲಿ ಶಾಸಕರು…!!!

Listen to this article

ಹರಪನಹಳ್ಳಿ ಕ್ಷೇತ್ರದ ಜನನಾಯಕಿ ಎಂ,ಪಿ,ವೀಣಾ,ಮಹಾಂತೇಶ್ ರವರ ಮುಂದುವರಿದ ಸಹಾಯಹಸ್ತ!

ಲಾಕ್ಡೌನ್ ಸಂದರ್ಭದಲ್ಲಿ ದುಡಿಮೆ ಇಲ್ಲದೇ ಹೈರಾಣಾದ ಜನತೆಗೆ ಹಾಗೂ ಕೋವಿಡ್ ಸೋಂಕಿತರು, ಬಡ ವರ್ಗದ ಜನತೆಗೆ ಹರಪನಹಳ್ಳಿ ಕ್ಷೇತ್ರದ ನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂ_ಪಿ_ವೀಣಾ_ಮಹಾಂತೇಶ್ ರವರ ಸಾರಥ್ಯದ “ಎಂ.ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್” ವತಿಯಿಂದ ಔಷಧೀಯ ಕಿಟ್ ಹಾಗೂ ಆಹಾರ ಧಾನ್ಯದ ಕಿಟ್ ಗಳನ್ನು ಪಟ್ಟಣದ ಐಬಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ #ಯುವ_ಕಾಂಗ್ರೆಸ್_ಕಾರ್ಯಕರ್ತರ ಸಮ್ಮುಖದಲ್ಲಿ ವಿತರಿಸಲಾಯಿತು.

ಯಾವುದೇ ದುಡಿಮೆ ಹಾಗೂ ಸಂಪಾದನೆ ಇಲ್ಲದೇ ಕಂಗಾಲಾದ ಜನತೆಗೆ ಇವರು ನೀಡಿದ ಅಲ್ಪ ಸಹಾಯ ಹೆಮ್ಮರವಾಗಿ ಮೂಡಿಬಂದದ್ದು ಜನಗಳ ಕಂಗಳಲ್ಲಿ ಉತ್ಸಾಹ ಕಂಡುಬಂತು. ಇದರ ಲಾಭ ಪಡೆದ ಜನತೆ ಖುಷಿಯಿಂದ ಹಾರೈಸಿದರು.

ಈ ಸಂದರ್ಭದಲ್ಲಿ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬ್ಬಿ ಹಾಗೂ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶೃಂಗಾರ ತೋಟದ ರವಿಚಂದ್ರನ್ ಮದನ್ ಸ್ವಾಮಿ ಭಾಗವಹಿಸಿದ್ದರು…

ವರದಿ. ಬಸಣ್ಣಿ ಬಣವಿಕಲ್.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend