ಅಧಿಕ ಶ್ರಾವಣ ಮಾಸದ ಪ್ರಯುಕ್ತ. “ಶ್ರೀ ಲಕ್ಷ್ಮೀ ನಾರಾಯಣ ದೇವರ ವಿಶೇಷ ಪೂಜೆ”…!!!

Listen to this article

ಅಧಿಕ ಶ್ರಾವಣ ಮಾಸದ ಪ್ರಯುಕ್ತ. “ಶ್ರೀ ಲಕ್ಷ್ಮೀ ನಾರಾಯಣ ದೇವರ ವಿಶೇಷ ಪೂಜೆ”

ಹರಪನಹಳ್ಳಿ:- ಅಧಿಕ ಶ್ರಾವಣ ಮಾಸದ ಪ್ರಯುಕ್ತ ಹರಪನಹಳ್ಳಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ದೇವರ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.

ಹರಪನಹಳ್ಳಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ.
ಶ್ರೀ ಲಕ್ಷ್ಮೀನಾರಾಯಣ ದೇವರ ಪೂಜೆಯನ್ನು ಶ್ರಾವಣ ಮಾಸದಲ್ಲಿ ಲಕ್ಷ್ಮೀನಾರಾಯಣ ಯೋಗವು ಪ್ರಯೋಜನಕಾರಿಯಾಗಲಿ ಈ ಅಗತ್ಯಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ಜವಾಬ್ದಾರಿ ಉದ್ಯೋಗಿಗಳ ಕೆಲಸದಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ. ಮತ್ತು ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಸಹಕರಿಸುವಿರಿ. ಕುಟುಂಬದ ವ್ಯಾಪಾರಸ್ಥರು ಉತ್ತಮ ಲಾಭವನ್ನು ಪಡೆಯುತ್ತಾರೆ ಮತ್ತು ಕುಟುಂಬ ಸದಸ್ಯರೊಂದಿಗೆ ವ್ಯಾಪಾರವನ್ನು ವಿಸ್ತರಿಸಲು ಯೋಜಿಸುತ್ತಾರೆ.

ಈ ಅವಧಿಯಲ್ಲಿ ಹಳೆಯ ಕಾಯಿಲೆಗಳನ್ನು ತೊಡೆದುಹಾಕುತ್ತದೆ ಮತ್ತು ಚೈತನ್ಯವನ್ನು ಅನುಭವಿಸುವ ವ್ಯವಹಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯು ಬಲಗೊಳ್ಳುವುದರಿಂದ ಮಾನಸಿಕ ಶಾಂತಿಯನ್ನು ಸಹ ಪಡೆಯುತ್ತದೆ ಎಂಬ ನಾಂಬಿಕೆಯಿಂದ ಈ ಲಕ್ಷ್ಮೀ ನಾರಾಯಣ ದೇವರ ಪೂಜೆಯನ್ನು ಮಾಡುತ್ತಾರೆ.

ಸಮಾಜದ ಎಲ್ಲಾ ಸುಮಂಗಳಿಯರು ಸೇರಿ ಶ್ರೀಲಕ್ಷ್ಮೀ ನಾರಾಯಣ ದೇವರಿಗೆ 33 ಪೂಜಾ ಸಾಮಗ್ರಿಗಳಿಂದ ಅರ್ಚನೆಯನ್ನು ಮಾಡಿದರು. ಓಂ ಶ್ರೀ ಪುರುಷೋತ್ತಮ ಸಹಸ್ರ ನಾಮಾವಳಿಯಿಂದ ಪೂಜೆ ಮಾಡಿದರೂ ಲೋಕ ಕಲ್ಯಾಣಾರ್ಥ ಕವಾಗಿ ದೇವರಲ್ಲಿ ಪ್ರಾರ್ಥಿಸಿದರು.

ಈ ಕಾರ್ಯಕ್ರಮದಲ್ಲಿ ವಾಸವಿ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಮುದುಗಲ್ ಸುಜಾತ ಕಾರ್ಯದರ್ಶಿ ಶ್ರೀಮತಿ ಹುಬ್ಬಳ್ಳಿ ಜ್ಯೋತಿ ಖಜಾಂಚಿ ಶ್ರೀಮತಿ ಪೆಂಡು ಕೂರ್ ಸೌಮ್ಯ ನಿರ್ದೇಶಕರು ಆರ್ಯವೈಶ್ಯ ಮಹಾಮಂಡಳಿ ಹಾಗೂ ಎಲ್ಲಾ ಸದಸ್ಯರು ಈ ಪೂಜೆಯನ್ನು ನೆರವೇರಿಸಿ ಕೊಟ್ಟಿರುತ್ತಾರೆ ಮತ್ತು ಆರ್ಯವೈಶ್ಯ ಕುಲಬಾಂಧ ವರೆಲ್ಲರ ಸಹಕಾರದೊಂದಿಗೆ ಈ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಿತು….

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend