ಬಿಡುವಿಲ್ಲದ ಜನಸೇವೆಯ ಮಧ್ಯೆ ಶ್ರೀವೆಂಕಟೇಶ್ವರ ದೇವರ ದರ್ಶನ ಪಡೆದ ಶ್ರೀಮತಿ,ಎಂ,ಪಿ,ವೀಣಾಮಹಾಂತೇಶ್!!
ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕರು, ಅಭಿವೃದ್ಧಿಯ ಹರಿಕಾರರಾಗಿದ್ದ ಎಂ, ಪಿ,ರವೀಂದ್ರ ಅವರ ನಿಧನಾನಂತರ ಅವರ ವಾರಸುದಾರರಂತೆ ಹಗಲಿರುಳು ಕ್ಷೇತ್ರದ ಜನತೆಗೋಸ್ಕರ ಶ್ರಮಿಸಿ ತಮ್ಮ ಸ್ವ-ನಿರ್ಧಾರದ ಸೇವಾಕಾರ್ಯಗಳ ಜೊತೆಗೆ ಕಾಂಗ್ರೆಸ್ ಪಕ್ಷ ಸೂಚಿಸುವ ಪ್ರತಿಯೊಂದು ಆದೇಶವನ್ನು ಪಾಲಿಸುವ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ,ಪಿ,ವೀಣಾಮಹಾಂತೇಶ್ ಅವರು, ಪ್ರಸ್ತುತ ಕೆಪಿಸಿಸಿ ನಿರ್ದೇಶನದಂತೆ ನಡೆಯುತ್ತಿರುವ ಕೋವಿಡ್-19 ನಿಂದ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಯಾತ್ರೆ ಕೈಗೊಂಡಿದ್ದು, ಇಂದು ಸ್ವಲ್ಪ ಬಿಡುವಿನ ಸಮಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಹರಪನಹಳ್ಳಿಯ ದೇವರ ತಿಮ್ಮಲಾಪುರದ ಪ್ರಸಿದ್ಧ ಶ್ರೀಕ್ಷೇತ್ರ_ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಕ್ಷೇತ್ರದ ಜನ-ಜಾನುವಾರುಗಳ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು..
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030