ಭಾರತೀಯ ಮುಸ್ಲಿಮರ ಮೇಲಿನ ದಬ್ಬಾಳಿಕೆಗೆ ಮುಸ್ಲಿಮರೇ ನೇರ,ಕಾರಣ.ಅಂಬೇಡ್ಕರ್‌ ಸಂವಿಧಾನ ಕಿತ್ತೆಸೆಯಲು ಹವಣಿಸುತ್ತಿರುವ,ಮನುವಾದಿಗಳ ಮೇಲುಗೈಗೆ ದಲಿತರೇ ಕಾರಣ ಯೋಚಿಸಿ …!!!

Listen to this article

ಭಾರತೀಯ ಮುಸ್ಲಿಮರ ಮೇಲಿನ ದಬ್ಬಾಳಿಕೆಗೆ ಮುಸ್ಲಿಮರೇ ನೇರ,ಕಾರಣ.ಅಂಬೇಡ್ಕರ್‌ ಸಂವಿಧಾನ ಕಿತ್ತೆಸೆಯಲು ಹವಣಿಸುತ್ತಿರುವ,ಮನುವಾದಿಗಳ ಮೇಲುಗೈಗೆ ದಲಿತರೇ ಕಾರಣ…ಯೋಚಿಸಿ ..

ಜಗತ್ತಿನ ಬಹಳಷ್ಟು ಜನಾಂಗಗಳು ಕಾಲಕಾಲಕ್ಕೆ ಕಾರಣಂತರಗಳಿಂದ ದಬ್ಬಾಳಿಕೆಗೆ ಒಳಗಾಗಿವೆ.ಅದಕ್ಕೆ ನೇರ ಕಾರಣ ಜನಸಂಖ್ಯೆಯ ಪ್ರಮಾಣ,ಅನಕ್ಷರತೆ ಮತ್ತು ಒಗ್ಗಟ್ಟಿನ ಕೊರತೆ.ಹೀಗಿದ್ದಾಗ ಆಡಳಿತದವರಿಂದ ಮತ್ತು ಮೇಲ್ವರ್ಗಗಳಿಂದ ಆಗಾಗ ದಮನಕ್ಕೊಳಗಾಗಿದ್ದಾರೆ.ಅದೂ ಕೂಡ ಅವರುಗಳ ಅಧಿಕಾರದ ಹಪಾಹಪಿಕೆಗಾಗಿ.ಭಾರತದಲ್ಲಿ ಮುಸ್ಲಿಮರ ಮೇಲೆ ಸಾಮಾಜಿಕ ದಬ್ಬಾಳಿಕೆಯಿಲ್ಲ,ಬದಲಾಗಿ ರಾಜಕೀಯ ದಬ್ಬಾಳಿಕೆಯಿದೆ.ದಲಿತರ ಮೇಲೆ ಸಾಮಾಜಿಕ ರಾಜಕೀಯ ಎರಡೂ ರೀತಿಯ ದಬ್ಬಾಳಿಕೆಯಿದೆ.ಹಾಗಾದರೆ ಇದರಿಂದ ಹೊರಬರಲು ಏನು ಮಾಡಬೇಕು? ಸುಮಾರು 20 ಕೋಟಿ ಜನಸಂಖ್ಯೆ ಇರುವುದರ ಹೊರತಾಗಿಯೂ ಮುಸ್ಲಿಮರು ಯಾಕೆ ಶೋಷಣೆಗೆ ಒಳಗಾಗುತ್ತಿದ್ದಾರೆ? ಸುಮಾರು 40 ಕೋಟಿ ಜನಸಂಖ್ಯೆಯಿದ್ದೂ ದೇಶವಾಳಬೇಕಾದ ದಲಿತರು ಯಾಕೆ ಮುಖ್ಯ ಅಧಿಕಾರಗಳಿಂದ ವಂಚಿತರಾಗಿದ್ದಾರೆ? ಇಂದಿಗೂ ಅಸ್ಪೃಶ್ಯತೆ ಯಾಕೆ ಜೀವಂತವಿದೆ? ಕೇವಲ 50 ಲಕ್ಷ ಜನಸಂಖ್ಯೆ ಇರುವ ಒಕ್ಕಲಿಗ- ಲಿಂಗಾಯತರು ದಬ್ಬಾಳಿಗೆ ಒಳಗಾಗುವುದಿಲ್ಲ.ಕೋಟಿಗಳ ಲೆಕ್ಕದಲ್ಲಿರುವ ನಾವೇಕೆ ದಿನ ಸತ್ತು ಸತ್ತು ಬದುಕುತ್ತೇವೆ? ಇದಕ್ಕೆ ಕಾರಣ ಈ ಕೆಳಗಿನಂತಿದೆ….

1.ಮುಸ್ಲಿಮರು ಮತ್ತು ದಲಿತರಲ್ಲಿ ಒಗ್ಗಟ್ಟಿನ ಕೊರತೆಯಿದೆ.ಪರಸ್ಪರರಲ್ಲಿ ಅಪನಂಬಿಕೆಗಳಿವೆ.ಮನುವಾದಿಗಳು ನಮ್ಮನ್ನು ಒಡೆಯುವಲ್ಲಿ ಯಶಸ್ವಿಯಾಗಿವೆ.

2.ದಲಿತರು ಮತ್ತು ಮುಸಲ್ಮಾನರಿಗೆ ಅರಿಯದಿರುವ ಒಂದು ವಿಷಯವೆಂದರೆ ಭಾರತದ ಮುಸ್ಲಿಮರು ಮೂಲತಃ ದಲಿತರು.ಈಗಿನ ದಲಿತರ ಅಣ್ಣ ತಮ್ಮಂದಿರು.ಬ್ರಾಹ್ಮಣರ ಅವಮಾನ ಮತ್ತು ದಬ್ಬಾಳಿಕೆಯಿಂದಾಗಿ ಇಸ್ಲಾಮಿಗೆ ಮತಾಂತರವಾದವರು.

3.ದಲಿತರು ಮತ್ತು ಮುಸಲ್ಮಾನರ ಅದೆಷ್ಟೋ ಮನೆಗಳಲ್ಲಿರುವ 18 ವರ್ಷಕ್ಕೆ ಮೇಲ್ಪಟ್ಟವರು ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಲ್ಲ.ಮತದಾನದ ದಿನ ಅದೆಷ್ಟೋ ಜನರು ಮತದಾನವನ್ನೇ ಮಾಡುವುದಿಲ್ಲ.ಭಾರತದಲ್ಲಿ ಮುಸ್ಲಿಮರ ಮತ್ತು ದಲಿತರ ಮತದಾನದ ಪ್ರಮಾಣ ಕೇವಲ 45%.ಮತದಾನದ ದಿನ ಮತದಾನವನ್ನು ಸಮಾಜದ ಮುಖಂಡರು ಮಂದೆ ನಿಂತು ಮಾಡಿಸುವುದಿಲ್ಲ.ಈಗಲೂ ಮೇಲ್ವರ್ಗದವರ ಶತಮಾನಗಳ ಕುತಂತ್ರಕ್ಕೆ ಬಲಿಯಾಗಿ ಗುಲಾಮರ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ..

4.ಒಂದೊಮ್ಮೆ ಭಾರತದ 90% ದಲಿತರು ಒಂದೇ ಪಕ್ಷಕ್ಕೆ ಮತದಾನ ಮಾಡಿದರೆ ಭಾರತದಲ್ಲಿ ಸಮಾಜವಿರೋಧಿ ಮತಾಂಧರು ಆಡಳಿತ ನಡೆಸಲಾಗುವುದಿಲ್ಲ.ಬದಲಾಗಿ ಆಡಳಿತ ಶಾಶ್ವತವಾಗಿ ದಲಿತರ ಕೈಯಲ್ಲಿರುತ್ತದೆ.

5.ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡಿ ಅವರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಅವರನ್ನು ಉದ್ರೇಕಿಸಿ ಗಲಭೆಗಳನ್ನು ಮಾಡಿಸಿ ಹಿಂದೂಗಳನ್ನು ಅವರ ವಿರುದ್ಧ ಎತ್ತಿಕಟ್ಟಿ ಅಧಿಕಾರವನ್ನು ಮನುವಾದಿಗಳು ಗಳಿಸಿಕೊಳ್ಳುತ್ತಿದ್ದಾರೆ.

6.ಚುನಾವಣೆಯ ಸಂದರ್ಭದಲ್ಲಿ ಪಾಕಿಸ್ತಾನ ಮುಸ್ಲಿಮರು ಕಾಶ್ಮೀರ ಅಯೋಧ್ಯೆ ಹೀಗಿನ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿ ದಲಿತರಿಗೆ ಮುಸ್ಲಿಮರಿಂದ ಅಪಾಯವಿದೆ ಎಂದು ಬಿಂಬಿಸಿ ದಲಿತರ ಮತಗಳು ಮನುವಾದಿಗಳ ತೆಕ್ಕೆಗೆ ಹೋಗುವಂತೆ ನೋಡಿಕೊಳ್ಳಲಾಗುತ್ತದೆ.

7.ಮುಸ್ಲಿಮರು ಇರುವುದರಿಂದಲೇ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿಲ್ಲ ಎಂಬ ವಾಸ್ತವವನ್ನು ಆಡಳಿತದವರು ವ್ಯವಸ್ಥಿತವಾಗಿ ಮರೆಮಾಚುತ್ತಿದ್ದಾರೆ.ಒಂದೊಮ್ಮೆ ಮುಸ್ಲಿಮರಿಲ್ಲದಿರುತ್ತಿದ್ದರೆ ಶತಶತಮಾನಗಳಿಂದ ದಲಿತರ ದಮನ ಮಾಡಿದಂತೆ ಈಗಲೂ ಮಾಡುತ್ತಿದ್ದರು.ಮುಸ್ಲಿಮರು ಮತ್ತು ದಲಿತರು ಒಂದಾಗುವ ಭಯದಿಂದ ದಲಿತರನ್ನು ಪುಸಲಾಯಿಸಲಾಗುತ್ತಿದೆ.ಭ್ರಮೆಗಳನ್ನು ಬಿತ್ತರಿಸಲಾಗುತ್ತಿದೆ.

8.ಮೂಲತಃ ಭಾರತ ದ್ರಾವಿಡರ ಅಂದರೆ ಶೂದ್ರರ ದೇಶ.ಇಲ್ಲಿನ ಬ್ರಾಹ್ಮಣರು ಯೂರೋಪಿನಿಂದ ಬಂದವರು.ವೇದಗಳಂತಹ ಗ್ರಂಥಗಳು ಅವರ ಹತ್ತಿರವಿದ್ದರಿಂದ ಅವರು ಅದರ ಜ್ಞಾನದ ಮೂಲಕ ಬಹುಸಂಖ್ಯಾತ ಅಸಂಘಟಿತ ಶೂದ್ರರನ್ನು ನೂರಾರು ವರ್ಷಗಳ ಕಾಲ ಹೊಸ ಹೊಸ ದೇವರುಗಳನ್ನು ಸೃಷ್ಟಿಸಿ ಕೃತಕವಾಗಿ ಆಳಿದರು.
ಭಾರತದ ಬಹುತೇಕ ಎಲ್ಲಾ ಮುಸ್ಲಿಮರು 1400 ವರ್ಷಗಳ ಹಿಂದೆ ಇಸ್ಲಾಮ್ ಭಾರತಕ್ಕೆ ಬರುವ ಮುಂಚೆ ಇಲ್ಲಿನ ಶೂದ್ರರಾಗಿದ್ದರು.ಇಸ್ಲಾಮಿನ ಸಮಾನತೆಯ ನೀತಿ ಮತ್ತು ದೇವ ಪ್ರಭೆಗೆ ಆಕರ್ಷಿತರಾಗಿ ಮತಾಂತರವಾದರು.
ಬ್ರಾಹ್ಮಣರ ದಬ್ಬಾಳಿಕೆಯಿಂದಾಗಿ ಬಹಳಷ್ಟು ಶೂದ್ರರು ಮುಸ್ಲಿಮರಾದರು.ಈ ಸತ್ಯವನ್ನು ಈ ದೇಶದ ಎಲ್ಲರೂ ಅರಿಯುವಂತಾಗಬೇಕು.

9.ದಲಿತರು ಶಿಕ್ಷಣದ ಬಗ್ಗೆ ವಿಶೇಷ ಗಮನ ನೀಡಬೇಕು.ಮಾಧ್ಯಮ ಸ್ಥಾಪಿಸಬೇಕು.ಬಾಬಾ ಸಾಹೇಬ್ ರ ಸಂವಿಧಾನದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರ ಅರಿಯಬೇಕು.ದಲಿತ ಬರೆಹಗಾರರ ಅವಶ್ಯಕತೆ ಸಮಾಜಕ್ಕಿದೆ.

10.ಸಮಾಜದಲ್ಲಿ ಬೀಡುಬಿಟ್ಟಿರುವ ಗಾಂಜಾ ವ್ಯಸನದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು.ಅಪರಾಧಿಕ ಮನಸ್ಥಿತಿಯ ಬಗ್ಗೆ ಸೂಕ್ತ ಶಿಕ್ಷಣ ನೀಡಬೇಕು.

11.ಸಮಾಜದ ಯಾರೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.

12.ಪ್ರಬಲವಾದ ರಾಜಕೀಯ ಭಾಗೀದಾರಿಕೆ ಎಲ್ಲರೂ ನಿಭಾಯಿಸಬೇಕು.

13.ಬಿಜೆಪಿ ಮತ್ತು ಆರ್ ಎಸ್ ಎಸ್ ಷಡ್ಯಂತ್ರಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು.

14.ಟಿವಿ ಚರ್ಚೆಗಳಲ್ಲಿ ಪ್ರಖರ ಜ್ಞಾನವಿರುವವರು ಪಾಲ್ಗೊಳ್ಳಬೇಕು.

15.ಮೂರು ಸಾವಿರ ವರ್ಷಗಳ ಹಿಂದೆ ವಲಸೆ ಬಂದ ಬ್ರಾಹ್ಮಣರು ತಮ್ಮ ಅನುಕೂಲಕ್ಕಾಗಿ ಇಲ್ಲಿನ ಬಹುಸಂಖ್ಯಾತ ಶೂದ್ರರನ್ನು ಕ್ಷತ್ರೀಯ ವೈಶ್ಯ ಶೂದ್ರರನ್ನಾಗಿ ವಿಂಗಡಿಸಿಕೊಂಡು, ದೇವರುಗಳನ್ನು ಸೃಷ್ಟಿಸಿಕೊಂಡು ಭಯ ಮೂಡಿಸಿ ಅದರ ಲಾಭವಾಗಿ ತಾವು ಆಳಿಕೊಂಡು ಬಂದ ಮತ್ತು ಆಳುತ್ತಿರುವ ಷಡ್ಯಂತ್ರವನ್ನು ಎಲ್ಲರೂ ಅರಿಯಬೇಕು ಮತ್ತು ಇತರರಿಗೂ ಅರಿಯಿಸಬೇಕು.

16.ಮುಸಲ್ಮಾನರ ಬಗ್ಗೆ ಹಿಂದೂಗಳಲ್ಲಿ ಮಾಧ್ಯಮದಿಂದ ಹರಡಿರುವ ಅಪಾರ ಅಪನಂಬಿಕೆಯನ್ನು ಹೋಗಲಾಡಿಸಲು ಸರ್ವರೂ ಕಂಕಣಬದ್ಧರಾಗಬೇಕು.

ಈ ಮೇಲಿನ ಅಂಶಗಳು ನಮ್ಮ ಸಮಾಜದ ಏಳುಬೀಳಿನಲ್ಲಿ ನಿರ್ಣಾಯಕ ಭೂಮಿಕೆಯನ್ನು ನಿಭಾಯಿಸುತ್ತವೆ.ಅಧಿಕಾರದಲ್ಲಿರಬೇಕಾದ ನಾವು ಇನ್ನೆಷ್ಟು ವರ್ಷ ಅಡಿಯಾಳಾಗಿರುವುದು? ಹೀಗೆ ಮುಂದುವರಿದರೆ ಬೆವರು ಸುರಿಸಿ ಬಾಬಾ ಸಾಹೇಬರು ನೀಡಿದ ಸಂವಿಧಾನ ಸವಲತ್ತನ್ನು ಕಳೆದುಕೊಂಡು ಮೂರ್ಖರಾಗುವುದು ಖಂಡಿತ.ಎಚ್ಚೆತ್ತು ಷಡ್ಯಂತ್ರಗಳ ವಿರುದ್ಧ ಹೋರಾಡೋಣ.ಪ್ರಬಲ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳೋಣ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend