ವರದಿ. ಧನಂಜಯ್
*ಹಗರಿಬೊಮ್ಮನಹಳ್ಳಿ:ಷಾರ್ಟ್ ಸರ್ಕ್ಯೂಟ್ ತಪ್ಪಿದ ಅನಾಹುತ*<->ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಉಪನೊಂದಣಾಧಿಕಾರಿ ಕಛೇರಿಯಲ್ಲಿ,ಮಂಗಳವಾರ ರಾತ್ರಿ ಷಾರ್ಟ್ ಸರ್ಕ್ಯೂಟ್ ಉಂಟಾಗಿ ಅಗ್ನಿ ಕಾಣಿಸಿಕೊಂಡಿದೆ.ಕವೇರಿಯಲ್ಲಿರುವ ಕಂಪ್ಯೂಟರ್, ಪ್ರಿಂಟರ್,ಜೆರಾಕ್ಸ್ ,ಕೆಲ ದಾಖಲಾತಿಗಳು ಸುಟ್ಟಿವೆ.ಸಿಬ್ಬಂದಿ ಮಹೇಶ ಕಛೇರಿ ಬೀಗ ಮುರಿದು ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾರೆ.ಅವರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ,ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗ್ನಿ ನಂದಿಸಿದ್ದಾರೆ.ಸ್ಥಳಕ್ಕಾಗಮಿಸಿದ ತಹಶಿಲ್ದಾರರಾದ ಶ್ರೀಮತಿ ಶರಣಮ್ಮ ಹಾಗೂ ಉಪಖಜಾನೆ ಅಧಿಕಾರಿ ಗುರುಬಸವರಾಜ ಪರಿಶೀಲಿಸಿದ್ದು,ಮುಖ್ಯ ದಾಖಲುಗಳು ಹಾಗೂ ಕಡತಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030