ದಾಳಿಂಬೆ ಗಿಡದ ಕುಡಿಯನ್ನು ತಿಂದು, ಕುರಿಗಳ ದಾರುಣ ಸಾವು…!!!

Listen to this article

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದ ದಾಳಿಂಬೆ ಗಿಡದ ಕುಡಿ ತಿಂದು ನೂರಾರು ಕುರಿಗಳು ಸಾವನ್ನಪ್ಪಿದ ದಾರುಣ ಘಟನೆ .ಹಂಪಸಾಗರ ಗ್ರಾಮದ ಹೊರವಲಯದಲ್ಲಿ ನಡೆದಿದೆ ಬನ್ನಿಕಲ್ಲು ಗ್ರಾಮದ ಕರಿಬಸಪ್ಪನಿಗೆ ಸೇರಿದ 48 ಕುರಿಗಳು .ಮತ್ತು ಮಂಜಪ್ಪನಿಗೆ ಸೇರಿದ 10 ಕುರಿಗಳು ವಿರೇಶನೀಗೆ ಸೆರಿದ 8ಕುರಿ ಅಜ್ಜಿ ಕರಿಬಸಪ್ಪನಿಗೆ ಸೇರಿದ ಹನ್ನೆರಡು ಕುರಿ ದೇವರಮನೆ ಕೊಟ್ರಪ್ಪನಿಗೆ ಸೇರಿದ ಹನ್ನೆರಡು ಕುರಿ ಸಾವನ್ನಪ್ಪಿದ್ದು ಇನ್ನೂ ಮೂವತ್ತು ಕೂ ಕ್ಕೂ ಹೆಚ್ಚು ಕುರಿಗಳು ಪರಿಸ್ಥಿತಿ ಚಿಂತಾಜನಕವಾಗಿದೆ ಇನ್ನೂ ನೂರಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ.

ಸ್ಥಳಕ್ಕೆ ತಹಸೀಲ್ದಾರ್ ಶರಣಮ್ಮ ಮತ್ತು ಪಶು ವೈದ್ಯಾಧಿಕಾರಿಗಳು,ಸ್ಥಳಕ್ಕೆ ಭೇಟಿ ನೀಡಿ,ಪರಿಶೀಲಿಸಿ,ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿತು,ದಾಳಿಂಬೆ ಗಿಡದ ಚಿಗುರು ತಿಂದು ಫುಡ್ ಫಾಯ್ಸನ್ ಆಗಿರ ಬಹುದು ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ,ವಾರದಿಂದ ಸುರಿದ ಜಿಟಿಜಿಟಿ ಮಳೆಗೆ ಮೇವು ಸಿಗದಂತಾಗಿ ಕುರಿಗಳು ದಾಳಿಂಬೆ ಗಿಡದ ಚಿಗುರು ತಿಂದು ಸಾವನ್ನಪ್ಪಿರುವ ದಾರುಣ ಘಟನೆ ಆಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು ಹಾಗೂ ಈ ಒಂದು ಘಟನೆಗೆ ತುತ್ತಾಗಿರುವ ಕುಟುಂಬಗಳಿಗೆ ಸ್ಥಳೀಯ ಶಾಸಕರು ತಾಲ್ಲೂಕು ಅಧಿಕಾರಿಗಳು ಮತ್ತು ಸರ್ಕಾರ ನೆರವಿಗೆ ಧಾವಿಸಬೇಕೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬಂದಿತು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend