ಕನ್ನಿಹಳ್ಳಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ. ವಿಜಯನಗರದ ಜಿಲ್ಲಾ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕನ್ನಿಹಳ್ಳಿ ಗ್ರಾಮದಿಂದ ಸುಕ್ಷೇತ್ರ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭ್ರಮರಾಂಭಿಕ ದೇವಿಯ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಾದಯಾತ್ರೆಯನ್ನು ಕನ್ನಿಹಳ್ಳಿ ಗ್ರಾಮದಿಂದ ದಿನಾಂಕ 20-03-2022ರ ಭಾನುವಾರ ಬೆಳಿಗ್ಗೆ 6ಗಂಟೆಯಿಂದ ಪಾದಯಾತ್ರೆ ಪ್ರಾರಂಭಿಸಿದರು. ಕಳೆದ 7ವರ್ಷಗಳಿಂದ ಪಾದಯಾತ್ರೆಯನ್ನು ಕನ್ನಿಹಳ್ಳಿ ಭಕ್ತರು ನೇರವೇರಿಸಿಕೊಂಡು ಬಂದಿದ್ದು ಈ ಬಾರಿ 8ನೇ ಪಾದಯಾತ್ರೆಗೆ ಜಿ. ಶಿವಪ್ಪ ಶಿಕ್ಷಕರು,ಕೊಟ್ನೂಳ ಸುರೇಶ್ ಗ್ರಾಮ ಪಂಚಾಯಿತಿ ಸದಸ್ಯರು
ವಾಗೆಸ್ ರೆಡ್ಡಿ ಕರಿಬಸವರಾಜ.ಬಿ.ಬುಳ್ಳಪ್ಪ.ಕೆ,ರಾಜಬಕ್ಷಿ,ಕೊಟ್ರೇಶ.ಬಿ,ಗುರುಬಸವರಾಜ ಹಾಗೂ ಇನ್ನೂ ಊರಿನ ಪ್ರಮುಖ ಪಾದಯಾತ್ರಿಗಳನ್ನೊಳಗೊಂಡ ತಂಡ ತಮ್ಮ ಸ್ವಗ್ರಾಮವಾದ ಕನ್ನಿಹಳ್ಳಿಯಿಂದ ಸುಮಾರು 500ಕೀಲೋ ಮೀಟರ್ನಷ್ಟು ದೂರವನ್ನು 10ದಿನಗಳು ಕ್ರಮಿಸಿ ಬಳಿಕ ತಮ್ಮ ನೆಚ್ಚಿನ ಆರಾಧ್ಯದೈವವಾದ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭ್ರಮರಾಂಭಿಕ ದೇವಿಯ ದರ್ಶನ ಪಡೆದು ಊರಿಗೆ ವಾಪಸ್ಸು ಮರಳಿ ಬರುತ್ತಾರೆ…
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030