ಪುನೀತ್ ರಾಜ್ಕುಮಾರ್ ಸ್ಮರಣಾರ್ಥವಾಗಿ ಹಾಗೂ ಆಂಜನೇಯ ಕಾರ್ತಿಕೋತ್ಸವದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ. ವಿಜಯ ನಗರ ಜಿ,ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಗ್ರಾಮದಲ್ಲಿ 18-12-2021ರಂದು ರಕ್ತದಾನ ಶಿಬಿರ ನಡೆಯಿತು. ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಬದಲಿ ಸಂಯೋಜನೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಅಂತೆಯೇ ಕೃತಕ ರಕ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮನಷ್ಯನ ದೇಹವಿಡೀ ಸಂಚರಿಸಿ, ಜೀವವನ್ನೇ ಹಿಡಿಕೊಂಡಿರುವ ಕೆಂಪು ವರ್ಣದ ದ್ರವ ರಕ್ತ. ಇಂತಹ ರಕ್ತದಾನ ಶಿಬಿರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮಗಿಮಾವಿನಹಳ್ಳಿ ಸಿಬ್ಬಂದಿ ಮತ್ತು ಅಂಕಸಮುದ್ರ ಯುವ ಬ್ರಿಗೇಡ್ಸ್(ರಿ) ಮತ್ತು ಅಂಕಸಮುದ್ರ ಊರಿನ ಹಿರಿಯ&ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ ಸ್ವಾಮಿ ವಿವೇಕಾನಂದ ರಕ್ತ ಭಂಡಾರ, ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಅಂಕಸಮುದ್ರದ ಊರಮ್ಮನ ದೇವಸ್ಥಾನದ ಬಯಲಿನಲ್ಲಿ ನಡೆಯಿತು.ಈ ಶಿಬಿರದಲ್ಲಿ 134 ಜನ ತಮ್ಮ ರಕ್ತವನ್ನು ದಾನ ಮಾಡಿದರು.ಅಭಿಮಾನಿಗಳು
ರಕ್ತದಾನ ಮಾಡುವ ಮುಖಾಂತರ .ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥ ಸಾರ್ಥಕ ಗೊಳಿಸಿದರು ಊರಿನ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯರು ಇನ್ನು ಇತರ ಮುಖಂಡರುಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…
ವರದಿ. ಧನಂಜಯ್, ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030