ಹೆಡಿಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ವಮಕ್ಕಳಿಗೆ ಉಚಿತ ಪಾದರಕ್ಷೆ ವಿತರಣೆ…!!!

Listen to this article

ಹೆಡಿಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ವಮಕ್ಕಳಿಗೆ ಉಚಿತ ಪಾದರಕ್ಷೆ ವಿತರಣೆ.

ಸಿಂಧನೂರು :ನ.26.ನಗರದ ಸುಕಾಲಪೇಟೆ ರಸ್ತೆಯ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್.ಮರಿಯಪ್ಪ ವಕೀಲರು ಹೆಡಿಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ವ ಮಕ್ಕಳಿಗೆ ಉಚಿತವಾಗಿ ಪಾದರಕ್ಷೆ ವಿತರಣೆ ಮಾಡಿದರು.
ಒಂದನೇಯ ತರಗತಿಯ‌ಯಿಂದ ಎಂಟನೇಯ ತರಗತಿವರೆಗೆ ಓದುವ ಮಕ್ಕಳಿಗೆ ಪಾದರಕ್ಷೆ ವಿತರಿಸಿ ಮಾತನಾಡಿದ ಹೆಚ್.ಮರಿಯಪ್ಪ ಸರಕಾರಿ ಶಾಲೆಯಲ್ಲಿ ಶ್ರೀಮಂತರತರ ಬಡ ಮಕ್ಕಳು ಒಳ್ಳೆಯ ಬಟ್ಟೆಯನ್ನು, ಪಾದರಕ್ಷೆಯನ್ನು ಹಾಕಿಕೊಳ್ಳದೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಈ ಶಾಲೆಯಲ್ಲಿ ಒಂದು ದಿನ ಸಾಕಷ್ಟು ಮಕ್ಕಳು ಬರಿಗಾಲಿನಲ್ಲಿ ಓಡಾಡುವದನ್ನು ನೋಡಿದೆ ಅಂದೇ ನಿರ್ಧಾರ ಮಾಡಿ ತಮ್ಮ ಸಂಭಾವನೆಯಲ್ಲಿ 25% ಸಮಾಜ ಸೇವೆಗಾಗಿ ಮಿಸಲಿಟ್ಟಿದ್ದೇನೆ. ಇದೇ ರೀತಿ ಮೂರು ಶಾಲೆಗಳಿಗೆ 1 ಸಾವಿರ ಮಕ್ಕಳಿಗೆ ಪಾದರಕ್ಷೆ ನೀಡಲು ನಿರ್ದಾರ ಮಾಡಿದ್ದೇನೆ.ಎಲ್ಲಾ ಮಕ್ಕಳು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ ಅಂದಾಗ ಮಾತ್ರ ನಾವು ಮಾಡಿದ ಕೆಲಸಕ್ಕೆ ಪ್ರತಿಫಲ ದೊರಕಿದಂತಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ವಕೀಲರಾದ ನೀರುಪಾದೆಪ್ಪ ಗುಡಿಹಾಳ ಮಾತನಾಡಿದ ಬದುಕಿನಲ್ಲಿ ಯಾವುದೇ ವ್ಯಕ್ತಿ ಸನ್ಮಾರ್ಗಕ್ಕೆ ಹೋಗಬೇಕಾದರೆ ಕೆಲವು ಒಳ್ಳೆಯ ಕೆಲಸ ಮಾಡಬೇಕಾಗುತ್ತದೆ.ಆ ಕೆಲಸ ಹೆಚ್ ಮರಿಯಪ್ಪ ವಕೀಲರು ಮಾಡುತ್ತಿದ್ದಾರೆ. ಮನುಷ್ಯ ಚಿಂತೆ ಮಾಡಬಾರದು, ಚಿಂತನೆ ಮಾಡಬಾರದು, ಚಿಂತೆ ಮಾಡಿದರೆ ಅನಾರೋಗ್ಯನಾಗುತ್ತಾನೆ, ಚಿಂತನೆ ಮಾಡಿದರೆ ಅರೋಗ್ಯವಾಗಿರುತ್ತಾನೆ. ಅರೋಗ್ಯವಿದ್ದಾಗ ಮಾತ್ರ ಏನು ಬೇಕಾದರೂ ಸಾಧಿಸಲು ಸಾದ್ಯ ಎಂದರು.
ಈ ಸಂಧರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಅಜ್ಮಿರಸಾಬ್,ಎಚ್.ಎಂ.ವಿ.ಎಚ್.ಚಾರಿಟೇಬಲ್ ಉಪಾಧ್ಯಕ್ಷ ಕೆ.ಮಹೇಶ,ವಕೀಲರುಗಳಾದ ಜಾದವ ಮುಲ್ಲಾ, ಶಿವಕುಮಾರ, ಹನುಮಂತಪ್ಪ ಯಾದವ, ವೀರೀಶ,ಪರಶುರಾಮ ತೀಡಿಗೋಳ, ಎಮ್.ಬಾಷಾ ವಾಣಿಜೋಧ್ಯಮಿಗಳು,ರಾಜಸಾಬ ಮೇಸ್ತ್ರಿ,ಸಿದ್ದಪ್ಪ, ಹನುಮಂತಪ್ಪ ಸಿ.ಆರ್.ಪಿ.ಕನಕನಗರ, ಜಿ.ಗುರು ಬಸಮ್ಮ ಪ್ರಭಾರಿ ಮುಖ್ಯ ಗುರುಗಳು, ಶಿಕ್ಷಕ ರುಗಳಾದ ರಾಜೇಶ.ಪಿ ಎಂ, ಅಂಬಮ್ಮ, ಸುಧಾ.ಎನ್. ದುಳ್ಳಿ, ಜಗದೀಶ, ರೇಣುಕಾ, ಸೇರಿದಂತೆ ಮುದ್ದು ಮಕ್ಕಳು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend