ಬನ್ನಿಗನೂರು ಗ್ರಾಮದಲ್ಲಿ ಸಂಭ್ರಮದಿಂದ ಶ್ರಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.
ಸಿಂಧನೂರು :ಅ. 9.ಬನ್ನಿಗನೂರು ಗ್ರಾಮದಲ್ಲಿ ಶ್ರಿ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವವನ್ನು ಆಚರಣೆ ಮಾಡಲಾಯಿತು. ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ 3% ರಿಂದ 7% ಮೀಸಲಾತಿಯನ್ನು ಹೆಚ್ಚಿ ಸಲು 246 ದಿನ ನಿರಂತರ ಹೋರಾಟಕ್ಕೆ ಕಾರಣೀಕರ್ತರಾದ ಶ್ರೀ ಪ್ರಸನ್ನನಂದಾ ಸ್ವಾಮಿಜೀ ಹಾಗೂ ಸಾರಿಗೆ ಸಚಿವರು ಹಾಗೂ ಪರಿಶಿಷ್ಟ ಪಂಗಡ ಅಭಿವೃದ್ಧಿ ಹರಿಕಾರರಾದ ಶ್ರೀ ರಾಮುಲು ರವರನ್ನು ನೆನೆಯುತ್ತಾ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಮತ್ನಾಳ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಹಾಗೂ ಅತಿಥಿ ಶಿಕ್ಷಕರು ಸಂಘದ ತಾಲೂಕು ಅಧ್ಯಕ್ಷರಾದ ದೇವರಾಜ ನಾಯಕ ,ಅಯ್ಯಪ್ಪ ಕೋರಿ, ದುರುಗಯ್ಯಕೋರಿ, ಹನುಮಯ್ಯ, ಶಿವರಾಜ, ಹನುಮೇಶ ಕೋರಿ, ಮಂಜಪ್ಪ ನಾಯಕ, ಹನುಮೇಶಹುಢೇದ್,ನರಸಪ್ಪ, ಸೋಮ, ನಾಗರಾಜ, ವಾಲ್ಮೀಕಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಊರಿನ ಗುರು ಹಿರಿಯರು ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030